ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸೌಹಾರ್ದತೆ ದುರ್ಬಲಗೋಳಿಸುವ ದಾಳಿಗಳು

ಸೌಹಾರ್ದತೆ ದುರ್ಬಲಗೋಳಿಸುವ ದಾಳಿಗಳು

Tue, 09 Mar 2010 17:49:00  Office Staff   S.O. News Service

ಕನ್ನಡದ ದಿನಪತ್ರಿಕೆಯೊಂದು ದಿಢೀರನೆ ತನ್ನ ಸಾಪ್ತಾಹಿಕದಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಧಾರ್ಮಿಕ ಭಾವನೆಗಳನ್ನು ಉದ್ರೇಕಗೊಳಿಸಲು ಬಳಸಬಲ್ಲ ಒಂದು ಲೇಖನವನ್ನು ಪ್ರಕಟಿಸುವುದರ ಹಿಂದೆ ಏನಾದರೂ ಉದ್ದೇಶಿತ ಗುರಿತಂತ್ರಗಳು ಇರಬಹುದೇ?’ ಎಂಬ ಪ್ರಶ್ನೆ ಎತ್ತಬಹುದೇಹಾಗೆ ಅನುಮಾನಿಸಬಾರದು ಎಂದರು ಮಾದ್ಯಮಗೋಷ್ಠಿಯಲ್ಲಿದ್ದ ಕೆಲವು ಮಿತ್ರರು! 

ಸಾಮಾಜಿಕ ಜವಾಬ್ದಾರಿ 

ಅದು ಬೆಳಗಾದರೆ ಈದ್ ಹಬ್ಬವಿದೆಹಾಗೆಯೇ ಹೋಳಿ ಹಬ್ಬವೂ ಇದಕ್ಕೆ ಹೊಂದಿಕೊಂಡಿದೆರಾಜ್ಯದಲ್ಲಿನ ರಾಜಕೀಯ ವಾತಾವರಣಕೋಮುಸಾಮರಸ್ಯ ಕದಡುವ ಹಲವು ಪ್ರಯತ್ನಗಳು ಇವುಗಳ ಹಿನ್ನೆಲೆಯಲ್ಲಿಅದೂ ಮೂಲ ಲೇಖಕಿಯೇ ಲೇಖನ ಉದ್ದೇಶವನ್ನು ಪ್ರಶ್ನಿಸಿರುವಾಗ ಒಂದಿಷ್ಟಾದರೂ ಅನುಮಾನಿಸಿವಿಶ್ಲೇಷಿಸಬಾರದೇಎಂದರೂ ಕೇಳಲಿಲ್ಲಲೇಖನ ಪ್ರಕಟಿಸುವ ಅಂತಹ ಧೋರಣೆನಿಲುವು ತಾಳುವುದು ಆಡಳಿತ ವರ್ಗಅದರ ಸಂಪಾದಕ ಮಂಡಳಿಯಾಗಿದೆಇಲ್ಲಿ ಪತ್ರಕರ್ತರಿಗೆ ಹೆಚ್ಚಿಗೆ ಏನೂ ಪಾತ್ರವಿರಲಿಲ್ಲ ಎಂಬ ಅಂಶ ನೆನಪಿಸಿದರೂ ಕೆಲವರ ಆಕ್ಷೇಪ ಹಾಗೇ ಇತ್ತುಬಹುಶಅದು ಅವರ ವೈಯಕ್ತಿಕ ಧೋರಣೆಗೂ ಮಾಲೀಕರ ನೀತಿಗೂ ತಾಳೆ ಇರಬಹುದೋ ಏನೊಆದರೆ ಎಲ್ಲಾ ರಾಜಕೀಯ ಪಕ್ಷಗಳುಸಂಘಟನೆಗಳಿಗೂ ನೀತಿಸಂಹಿತೆಸಾಮಾಜಿಕ ಜವಾಬ್ದಾರಿ ಭೋಧಿಸುವ ಮಾಧ್ಯಮಗಳಿಗೂ ಒಂದು ನೀತಿ ಸಂಹಿತೆಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಅವರು ನಿರಾಕರಿಸುತ್ತಿದ್ದರುಹೀಗಾಗಿ ಮಾದ್ಯಮಗಳ ಮಾಲಿನ್ಯದ ಬಗ್ಗೆ ಆತಂಕಪಡುವುದು ಹೆಚ್ಚುವುದು ಅಸಹಜವೇನಲ್ಲ. 

 

ಪ್ರಶ್ನೆಗಳು

 

 ಪ್ರಶ್ನೆ ಇರುವುದು ಯಾರಾದರೂ ಲೇಖಕರುತಮ್ಮ ಅನಿಸಿಕೆ ವ್ಯಕ್ತಪಡಿಸಲು ಅವರು `ಮುಕ್ತರು‘ ಅವರು ಮಾತ್ರವಲ್ಲ ಯಾರೇ ಆಗಲಿ…. ಅದನ್ನು ಪ್ರಕಟಿಸು ವವರದ್ದುಪ್ರತಿಭಟಿಸುವವರದ್ದು ಅಷ್ಟೆಆದರೆ ಅಂತಹವುಗಳನ್ನು ಬರೆಯುವಾಗಪ್ರಕಟಿಸುವಾಗ ಬದುಕಿರುವ ಸುತ್ತಲಿನ ವಾತಾವರಣಸ್ಥಿತಿಗಳನ್ನುಪರಿಣಾಮಗಳನ್ನು ನಿರ್ಲಕ್ಷಿಸಬೇಕಿಲ್ಲಈ ಪ್ರಶ್ನೆ ಎದ್ದಿರುವುದು ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಲೇಖನದಿಂದಾಗಿ ಕನ್ನಡಪ್ರಭ ದಿನ ಪತ್ರಿಕೆಯು ತನ್ನ ಸಾಪ್ತಾಹಿಕದಲ್ಲಿ ಪ್ರಕಟಿಸಿದ `ಪರ್ದಾ ಹೈ ಪರ್ದಾ‘ ಎಂಬ ಲೇಖನ ಪ್ರಕಟಿಸಿದ ಬಳಿಕ ಹಾಸನಶಿವಮೊಗ್ಗಗಳಲ್ಲಿ ವ್ಯಾಪಕ ಹಿಂಸಾಚಾರಗೋಲಿಬಾರ್ ಇಬ್ಬರ ಬಲಿನಂತರದಲ್ಲಿ ಮಂಗಳೂರುಉಡುಪಿ ಮುಂತಾದೆಡೆ ಹಬ್ಬಿದ ಗಲಭೆಪತ್ರಿಕಾ ಕಛೇರಿಗಳ ಮೇಲಿನ ಧಾಳಿಗಳು ಹುಟ್ಟುಹಾಕಿದ ಆತಂಕದ ವಾತಾವರಣ.

ಈಗಾಗಲೇ ತನ್ನ ವಿವಾದಾತ್ಮಕ ಬರಹಗಳಿಂದ ಮುಸ್ಲಿಂ ಮೂಲಭೂತವಾದಿಗಳ `ಫತ್ವಾಕ್ಕೆ ಗುರಿಯಾಗಿ ಜೀವ ಬೆದರಿಕೆಯಿಂದ ದೇಶಾಂತರಗೊಂಡು `ಭೂಗತ ಜೀವನ‘ ಕಳೆಯುತ್ತಿರುವ ತಸ್ಲೀಮಾ ತಾನು ಆ ದಿನಪತ್ರಿಕೆಗೆ ಲೇಖನ ಬರೆದಿಲ್ಲತನ್ನ ಹಲವು ಅಭಿಪ್ರಾಯಗಳನ್ನು ತಿರುಚಲಾಗಿದೆಯೆಂದೂ ಹೇಳಿದ್ದಾರೆಭಾರತದ ಆಶ್ರಯದಲ್ಲಿರುವ ತಸ್ಲೀಮಾಗೆ `ವೀಸಾದ ಅವಧಿಯು ಕೆಲವು ತಿಂಗಳಲ್ಲಿ ಮುಗಿಯಲಿದೆಪ್ರಕಟಿತ ಲೇಖನ ಮತ್ತು ನಂತರ ಗಲಭೆಗಳ ಬಗ್ಗೆ ಕೇಂದ್ರ ಗೃಹಸಚಿವ ಚಿದಂಬರಂ ಆಕ್ಷೇಪದ ಅನುಮಾನದಿಂದ ಪ್ರತಿಕ್ರಿಯಿಸಿದ್ದಾರೆಇವೂ ಕೂಡ ಗಮನಿಸಬೇಕಾದ ಅಂಶಗಳು.
ಇಂತಹ ವಿವಾದಕ್ಕೆ ಹಲವು ಆಯಾಮಗಳಿರಬಹುದುಅಥವಾ ಬರಬಹುದುಕರ್ನಾಟಕ ಸರ್ಕಾರವೇ ಆ ಪತ್ರಿಕೆಗಳ ಮೇಲೆ(ಕನ್ನಡ ಪ್ರಭ ಹಾಗೂ ಉರ್ದು ಪತ್ರಿಕೆಮೊಕದ್ದಮೆ ದಾಖಲಿಸಿದೆತನಿಖೆಯೂ ನಡೆಯಲಿದೆಯಂತೆಈ ಲೇಖನದಲ್ಲಿ ಈಗಿರುವ ಬುರ್ಕಾ ಪದ್ಧತಿಯನ್ನು ವಿರೋಧಿಸಿ ಗಂಡಸರಿಗೂ ಏಕಿಲ್ಲ ಎಂದು ತಸ್ಲಿಮಾ ಪ್ರಶ್ನಿಸಿದ್ದಾರೆಪ್ರವಾದಿಯೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಕಲ್ಪಿಸಿಖುರಾನ್ನ ಕೆಲವನ್ನು ಪ್ರಶ್ನಿಸಿಕೆಲವರನ್ನು ಕೆಣಕಿದ್ದಾರೆಬಹುತೇಕ ಎಲ್ಲಾ ಧರ್ಮಗಳುಅವುಗಳ ವಿಧಿವಿಧಾನಗಳು ಮಹಿಳೆಯನ್ನು ಎರಡನೆ ದಜರ್ೆ ನಾಗರೀಕಳನ್ನಾಗಿಯೇ ನೋಡಿದೆಒಂದೊಂದು ಧರ್ಮಗಳಲ್ಲಿಯೂ ಅವರ ಅಳಲುಸ್ಥಾನಮಾನ ಪಾತ್ರಗಳು ಬಹುತೇಕ ಒಂದೇಬುರ್ಕಾ ಪದ್ಧತಿಯೇ ಆಗಲಿಸತಿ ಪದ್ಧತಿಯೋ ಮಾನವೀಯತೆಯುಳ್ಳ ಎಲ್ಲರೂ ಚಿಂತಿಸಬೇಕಾದುದುದೇಆದರೆ ಮಹಿಳಾ ವಿಮೋಚನೆಯ ದಿಕ್ಕಿನಲ್ಲಿ ಒಟ್ಟಿನಲ್ಲಿ ಇಂದು ಎತ್ತಬೇಕಾದ ಆದ್ಯತೆಯ ಪ್ರಶ್ನೆಗಳಾವುವುಅವರ ಹಾದಿ ಚರ್ಚಾರ್ಹವೇ ಆಗಿದೆ.
 
ಸಂಘ ಪರಿವಾರದ ಕ್ರಮಗಳುಪ್ರತ್ಯುತ್ತರಗಳು,
 
ಕರ್ನಾಟಕದಲ್ಲೀಗ ಸಂಘ ಪರಿವಾರವು ಸತತವಾಗಿ ಹಿಂದೂ ಮುಸ್ಲಿಂರ ನಡುವೆ ಕೋಮು ವಿಭಜನೆಗೆ ಸತತವಾಗಿ ಪ್ರಯತ್ನಿಸುತ್ತಲೇ ಇದೆಮುಸ್ಲಿಂರ ನಡುವೆ ಕೋಮು ವಿಭಜನೆಗೆ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಹೊಸ ಹೊಸ ಧಾಳಿಗಳನ್ನು ಜೋಡಿಸುತ್ತಿದೆಉಡುಗೆ ಊಟದ ನೀತಿಸಂಹಿತೆಯನ್ನು ಹೇರುವ ಸಂಘ ಪರಿವಾರ ಮಂಗಳೂರುಭಟ್ಕಳ ಹೀಗೆ ಕರಾವಳಿಯಲ್ಲಿ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರುಅವರ ದಾರ್ಮಿಕ ವಿಧಿಯಂತೆ ಬುರ್ಕಾ ಹಾಕಿ ಬರಬಾರದೆಂದು ಫರ್ಮಾನು ಹೊರಡಿಸಿವಿದ್ಯಾರ್ಥಿನಿಯರನ್ನು ಹಿಂಸಿಸುತ್ತಿರುವುದುಇದಕ್ಕೆ ಆ ಕಾಲೇಜುಗಳ ಆಡಳಿತ ಮಂಡಳಿಯೇ ಕೈಜೋಡಿಸಿ ಬೆದರಿಸಿರುವುದು ನಡೆದಿದೆಮುಸ್ಲಿಂ ಯುವತಿಯರು ಶಿಕ್ಷಣ ಪಡೆಯಲು ಮುಂದಾಗುತ್ತಿರುವುದನ್ನು ಅವರು ಸಹಿಸಲು ಡ್ರೆಸ್ ಕೋಡ್ ಹೆಸರಲ್ಲಿ ಆಯ್ಕೆಯ ಹಕ್ಕನ್ನು ಮನ್ನಿಸಲು ಸಿದ್ಧರಿಲ್ಲಚೆಡ್ಡಿಪಡೆಗಳ ಇಂತಹ ಫ್ಯಾಸಿಸ್ಟ್ ಕುಕೃತ್ಯಗಳಿಗೆ ಪ್ರತ್ಯುತ್ತರವೆಂದು ಮೂಲಭೂತವಾದಿ ಸಂಘಟನೆಯಾದ ಕೆ.ಎಫ್.ಡಿ.ಯು ಮಹಿಳೆಯರು ಕಡ್ಡಾಯವಾಗಿ ಬುರ್ಕಾ ಧರಿಸಬೇಕೆಂಬ`ಚಳುವಳಿ‘ ಕೈಗೊಂಡಿರುವುದು ಒಂದೇ ರೀತಿಯ ಅತಿರೇಕಗಳು. 
 
ಹಾಳುಗೆಡಹುವ ಹಾದಿ
ಈಗಂತೂ ಆರ್ಎಸ್ಎಸ್ ಸರ್ಕಾರದ ಮೂಲಕವೇ ವೈವಿದ್ಯಮಯ ಆಹಾರದ ಪದ್ಧತಿಯನ್ನು ನಿರ್ಬಂಧಿಸುವ ರೈತರ ಬವಣೆ ಹೆಚ್ಚಿಸುವಮುಖ್ಯವಾಗಿ ಮುಖ್ಯವಾಗಿ ಮುಸ್ಲಿಂ ಅಲ್ಪಸಂಖ್ಯಾತರನ್ನು ತಮ್ಮ ದಾಳಿಗೆ ಗುರಿಯಾಗಿಸಿಕೊಂಡಿರುವ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ 2010 ನ್ನು ತರಲು ಹೊರಟಿದೆ. (ತಾಂತ್ರಿಕ ಕಾರಣಗಳಿಗೆ ಈಗ ಹಿಂಪಡೆದರೂ ಮತ್ತೆ ಮಂಡಿಸಬಹುದು)ಅದಕ್ಕಾಗಿ ರಾಜ್ಯದಾದ್ಯಂತ ಸಂಘ ಪರಿವಾರದ ಸಂಘಟನೆಗಳು ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಉದ್ರಿಕ್ತವಾಗಿ ಪ್ರಚಾರಿಸುತ್ತಿವೆ`ಪರ್ದಾ‘ ಲೇಖನದ ಸುತ್ತ ಹಾಗೂ ನಂತರದಲ್ಲಿ ನಡೆದ ಘಟನೆಗಳು ಕೋಮುಸೌಹಾರ್ದತೆಯನ್ನು ಹಾಳುಗೆಡಹುವ ಹಿಂಸಾತ್ಮಕ ಹಾದಿಯಲ್ಲಿರುವಂತಹವು.
 
ಪರಸ್ಪರ ಬಲ
 `ಪರ್ದಾ‘ ಲೇಖನವನ್ನು ಪ್ರತಿಭಟಿಸಿ ಹಾಸನದಲ್ಲಿ ಕೆಲವು ಮುಸ್ಲಿಂ ಅಲ್ಪಸಂಖ್ಯಾತರು ಮೆರವಣಿಗೆಗೆ ಮುಂದಾದಾಗನಡೆದ ಕಲ್ಲು ತೂರಾಟಗಳುಇದಕ್ಕೆ ಕಾದಿದ್ದರೇನೋ ಎಂಬಂತೆ ಬಜರಂಗದಳಶ್ರೀರಾಮಸೇನೆ ಮುಂತಾದವರ ಮರುಧಾಳಿಗಳು ಏನನ್ನು ತೋರಿಸುತ್ತವೆಹಾಗೆಯೇ ಶಿವಮೊಗ್ಗದ ಘಟನೆಗಳು

Share: