ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಅಲ್ಪಸಂಖ್ಯಾತರ ಆಯೋಗದ ಆದ್ಯಕ್ಷರ ಪ್ರವಾಸ

ಅಲ್ಪಸಂಖ್ಯಾತರ ಆಯೋಗದ ಆದ್ಯಕ್ಷರ ಪ್ರವಾಸ

Mon, 12 Apr 2010 13:05:00  Office Staff   S.O. News Service

ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತರ ಆಯೋಗದ ಆಧ್ಯಕ್ಷರಾದ ಶ್ರೀ ಖುಸ್ರೋ ಖುರೈಷಿ ಅವರ ಏಪ್ರಿಲ್ ಮಾಹೆಯ ಪ್ರವಾಸ ಕಾರ್ಯಕ್ರಮದನ್ವಯ ಏಪ್ರಿಲ್ ೧೪ರಂದು ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿರುವರು.
ಅಂದು ಬೆಳಿಗ್ಗೆ ೧೦ ಗಂಟೆಗೆ ಚಿಕ್ಕಮಗಳೂರಿನಿಂದ ಅರಸೀಕೆರೆ ತಾಲ್ಲೂಕಿನ ಜಾವಗಲ್‌ಗೆ ಆಗಮಿಸಿ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಭೇಟಿ  ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲಿರುವರು. ಅಂದು ಸಂಜೆ ೬ ಗಂಟೆಗೆ ಹಾಸನಕ್ಕೆ ಆಗಮಿಸಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವ ಅಧ್ಯಕ್ಷರು ಮರುದಿನ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.


Share: