ಬೆಂಗಳೂರು, ಜನವರಿ 19: ಒತ್ತೆ ಹಣಕ್ಕಾಗಿ ನಿನ್ನೆ ಅಪಹರಣಕೊಳಗಾಗಿದ್ದ ಎಂಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಕರಣ ಸುಖಾಂತಗೊಂಡಿದೆ.
ಅಪಹರಣಕೊಳಗಾಗಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಉತ್ತರ ಭಾರತದ ಮೂಲಕ ವಿದ್ಯಾರ್ಥಿ ಜಿತಿನ್ ನನ್ನು ಅಪಹರಣಕಾರರಿಂದ ಕೊಡಿಗೆ ಹಳ್ಳಿ ಪೊಲೀಸರು ರಕ್ಷಿಸಿ ೩ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಟ್ಟಹಳ್ಳಿ ನಿವಾಸಿ ಸಿರಾಜ್, ನಾಜಿರ್ ಮತ್ತು ಶಬೀರ್ ಬಂದಿತ ಆರೋಪಿಗಳು. ನಿನ್ನೆ ಮಧ್ಯಾಹ್ನ ೨ ಗಂಟೆಗೆ ಸಹಕಾರ ನಗರದ ಕೆನರಾ ಲೇಔಟ್ನ ಜಗಜೀವನ್ ಅಪಾರ್ಟ್ಮೆಂಡ್ನಿಂದ ಈ ವಿದ್ಯಾರ್ಥಿ ಅಪಹರಿಸಿ ಬಿಡುಗಡೆಗೆ ೧೦ ಲಕ್ಷ ಒತ್ತೆ ಹಣ ನೀಡಬೇಕೆಂದು ಇಂಜಿನಿಯರ್ ಕಾಲೇಜಿನ ಇನ್ನೊಬ್ಬ ವಿಧ್ಯಾರ್ಥಿಗೆ ಮೊಬೈಲಿನಿಂದ ಕರೆಮಾಡಿದರು.
ಈ ಸಂಬಂಧ ಅಮಿತ್ ಎಂಬ ವಿದ್ಯಾರ್ಥಿ ಕೊಡಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಕೊಡಿಹಳ್ಳಿ ಪೊಲೀಸರು ದೂರು ದಾಖಲಿಸಿ ಅಪಹರಣ ಕೊಳಗಾದ ಜಿತಿನ್ನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.