ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದ ರೇಶ್ಮೆ ಬೆಳೆಗಾರರಿಗೆ ಮೊಬೈಲ್ ಮೂಲಕ ಹವಾಮಾನ ವರದಿ

ಬೆಂಗಳೂರು: ರಾಜ್ಯದ ರೇಶ್ಮೆ ಬೆಳೆಗಾರರಿಗೆ ಮೊಬೈಲ್ ಮೂಲಕ ಹವಾಮಾನ ವರದಿ

Sat, 30 Jan 2010 17:09:00  Office Staff   S.O. News Service

ಬೆಂಗಳೂರು,ಜನವರಿ 30: ರೇಷ್ಮೆ ಬೆಳೆಗಾರರಿಗೆ ಹವಾಮಾನದ ಪರಿಸ್ಥಿತಿ,ಮಾರುಕಟ್ಟೆಯ ವಿವರ ನೀಡುವುದೂ ಸೇರಿದಂತೆ ಹಲವು ಬಗೆಯ ಮಾಹಿತಿಗಳನ್ನು ಮೊಬೈಲ್ ಮೂಲಕ ಒದಗಿಸುವ ಕಾರ್ಯಕ್ಕೆ ಇಂದಿಲ್ಲಿ ಚಾಲನೆ ನೀಡಲಾಗಿದ್ದು ಮೈಸೂರು ಜಿಲ್ಲೆಯ ರೈತರು ಪ್ರಪ್ರಥಮವಾಗಿ ಈ ಸೇವೆಯ ಪ್ರಯೋಜನ ಪಡೆಯತೊಡಗಿದ್ದಾರೆ.

 

ಥಾಮ್‌ಸನ್ ರಾಯಟರ್ಸ್ ಸಂಸ್ಥೆ ಈ ಸೇವೆಯನ್ನು ರಾಜ್ಯದಲ್ಲಿ ಆರಂಭಿಸಿದ್ದು ರೇಷ್ಮೆ ಸಚಿವ ವೆಂಕಟರಮಣಪ್ಪ ಇಂದಿಲ್ಲಿ ಇದಕ್ಕೆ ಚಾಲನೆ

ನೀಡಿದರು.

 

 

ಥಾಮ್‌ಸನ್ ರಾಯಟರ್ಸ್ ಸಂಸ್ತೆಯ ಅಂಗವಾದ ರಾಯಟರ್ಸ್ ಮಾರ್ಕೆಟ್ ಲೈಟ್ ಭಾರತದಲ್ಲಿ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತಿದ್ದು ಆ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ತಮ್ಮ ಹಿತ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.

 

 

ಪ್ರಾರಂಭಿಕವಾಗಿ ಮೈಸೂರು ಜಿಲ್ಲೆಯ ಅರವತ್ತೆಂಟು ರೈತರು ವಾರ್ಷಿಕ ೬೦೦ ರೂಗಳನ್ನು ಪಾವತಿಸಿ ಈ ಸೇವೆಯನ್ನು ಪಡೆಯತೊಡಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

 

 

ಆಯಾ ತಾಲ್ಲೂಕುಗಳಲ್ಲಿ ಇರುವ ಹವಾಮಾನದ ಪರಿಸ್ಥಿತಿ,ಮಾರುಕಟ್ಟೆಯ ಮಾಹಿತಿ,ರೇಷ್ಮೆ ಕೃಷಿಗೆ ಸಂಬಂಧಿಸಿದ ಎಲ್ಲಾ ಸುದ್ಧಿ ಸೇರಿದಂತೆ ಹಲವು ಬಗೆಯ ಮಾಹಿತಿಗಳನ್ನು ರೈತರು ಈ ಸೇವೆಯ ಮೂಲಕ ಪಡೆದುಕೊಳ್ಳಲಿದ್ದಾರೆ.

 

 

ಇದರ ಅನುಕೂಲವನ್ನು ಪಡೆದು ರೈತರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದ ಅವರು,ದೇಶದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ರೈತರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

 

 

ಕೈಗಾರಿಕಾ ನಿವೇಶನ

 

ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಪ್ರತೀ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಲಾಗುತ್ತಿದ್ದು ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿ ಮುನ್ನೂರು ಎಕರೆ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

 

ಈ ಪ್ರಮಾಣದ ಭೂಮಿಯಿಂದ ೨೪೪೫೦ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಲಾಗುವುದು ಎಂದ ಅವರು,ಬೃಹತ್ ಕೈಗಾರಿಕೆಗಳಿಗೆ ನೀಡುವ ಆದ್ಯತೆಗಿಂತ ಹೆಚ್ಚಾಗಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ತಮ್ಮ ಅನಿಸಿಕೆ ಎಂದು ವಿವರಿಸಿದರು.

 


Share: