ಕನ್ನಡಕ್ಕೆ ಇರುವುದು ಒಂದೇ ವಿಶ್ವವಿದ್ಯಾಲಯ ಕನ್ನಡ ವಿವಿಯು ದೇಶಿ ಪರಂಪರಾ ಶೈಲಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ,ಗಿಡಗಳನ್ನು ಬೆಳೆಸಿ ಇಡೀ ಪ್ರದೇಶವನ್ನು ಹಸಿರುಕರಣಗೊಳಿಸಿ, ಎಲ್ಲರ ಗಮನ ಸೆಳೆಯುವುದಕ್ಕೆ ಕಾರಣವಾಯಿತು. ಕನ್ನಡ ವಿವಿ ಬೆಳೆದಂತೆಲ್ಲಾ 700 ಏಕರೆ ಭೂಮಿಯು ಸಾಕಾಗುವುದಿಲ್ಲ. ಇನ್ನೂ 500 ಏಕರೆ ಭೂಮಿಯಾದರೂ ಬೇಕು. ನೀಡಿ ಎಂದು ಆಗೀನ ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಸರ್ಕಾರಕ್ಕೆ ಮನವಿ ನೀಡಿದ್ದರು. ನಂತರ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ಆಲೋಚನೆ ಮಾಡಲೇ ಇಲ್ಲ. ಯುಜಿಸಿ ಅನುದಾನ ಪಡೆದು, ಕನ್ನಡ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿ ತನ್ನದೇ ಆದ ಶೈಕ್ಷಣಿಕ ಅಭಿವೃದ್ಧಿಗೆ ಕಾರಣವಾಯಿತು. ರಾಜ್ಯ ಸರ್ಕಾರವು ವರ್ಷಕ್ಕೆ ಇಂತಿಷ್ಟು ಅನುದಾನ ನೀಡುತ್ತಾ ಬಂದಿದ್ದು ಬಿಟ್ಟರೆ ಉಳಿದಂತೆ ಅಲ್ಲಿಯ ಅನೇಕ ಯೋಜನೆಗಳಿಗೆ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ. ಕನ್ನಡಿಗರ ಏಕೈಕ ಪ್ರತಿನಿಧಿಯಾಗಿರುವ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಸರ್ಕಾರವು ತಾತ್ಸಾರ ಭಾವನೆ ಹೊಂದಿದೆ. ವಿವಿಧ ವಿಭಾಗಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆ. ರಚನೆಯಾಗಿರುವ ಯಾವ ಪೀಠಗಳಿಗೂ ಸ್ವಂತಹ ಕಟ್ಟಡಗಳಿಲ್ಲ. ಎಂ.ಎ. ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಸಹ ಒಂದು ವಿಶಾಲ ಕಟ್ಟಡವಿಲ್ಲ. ಕನ್ನಡ ವಿವಿಯು ಇಂತಹ ಹಲವಾರು ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದೆ. ಆದರೆ ಸರ್ಕಾರಕ್ಕೆ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲದಿರುವುದರಿಂದ ಇಂತಹ ಯಾವುದೇ ರೀತಿ ಭೌತಿಕ ವಾತಾವರಣ ನಿರ್ಮಾಣಕ್ಕೆ ಸ್ಪಂದಿಸುತ್ತಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಇರುವ ಕನ್ನಡ ವಿಶ್ವವಿದ್ಯಾಲಯದಲ್ಲಿ `ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)’ ಎನ್ನುವ ಖಾಸಗಿ ಸಂಸ್ಥೆಗೆ 80 ಏಕರೆ ಭೂಮಿ ನೀಡಿದೆ. ಭೂಮಿ ಪೂಜೆ ನಡೆಸಿ, ಆನಂತರ ಸಿಂಡಿಕೇಟ್ ಸಭೆಯಲ್ಲಿ ಇಬ್ಬರು ಡೀನ್ಗಳು ಗೈರು ಹಾಜರಾಗುವಂತೆ ನೋಡಿಕೊಂಡು ತರಾತುರಿಯಲ್ಲಿ ಇತರೆ ವಿಷಯಗಳಲ್ಲಿ ಈ ವಿಷಯ ತಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನದ ಹಿಂದೆ ಸಚಿವರಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ.
ವಿಜಯನಗರ ಪುನಶ್ಚೇತನ ಪ್ರತಿಷ್ಠಾನ. ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ ಪ್ರಯತ್ನ ನಡೆಸಿದ್ದರು. ಇದರ ವಿರುದ್ಧ ನಾಡಿನಾದ್ಯಂತ ಬಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಇದನ್ನು ಕೈಬಿಟ್ಟರು. ಈಗ ಹಿಂಬಾಗಿಲಿನಿಂದ ಇದನ್ನು ತರಲು ಖಾಸಗಿ ಟ್ರಸ್ಟ್ಗೆ ಕನ್ನಡ ವಿವಿಯ 80 ಏಕರೆ ಭೂಮಿ ಪರಭಾರೆ ಮಾಡುವ ಮೂಲಕ ಅಲ್ಲಿ ಕೃಷ್ಣದೇವರಾಯನ ಪ್ರತಿಮೆ ಸ್ಥಾಪನೆ, ದೆಹಲಿ ಅಕ್ಷರಧಾಮ ಮತ್ತು ಕುರುಕ್ಷೇತ್ರದ ಮಹಾಭಾರತ ಥೀಮ್ ಪಾರ್ಕ್ ನಿರ್ಮಾಣ, ವಿಜಯನಗರ ಕಾಲದ ವಸ್ತು ಸಂಗ್ರಹಾಲಯ,ವಿಜಯನಗರ ಜನ- ಜೀವನ, ವೈಭವ ನಿರೂಪಿಸುವ ಮಲ್ಟಿಮಿಡೀಯಾ ಪ್ರದರ್ಶನ, ಪ್ರತಿಷ್ಠಾನ ಧ್ಯೇಯಕ್ಕೆ ಅನುಗುಣವಾಗು ವಂತಹ ಇತರ ಚಟುವಟಿಕೆಗಳು ನಡೆಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ. ಈ ಟ್ರಸ್ಟ್ ಖಾಸಗಿಯಲ್ಲ, ಸರ್ಕಾರದ್ದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೊಸ ರಾಗ ತೆಗೆದಿದ್ದಾರೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಎಂಬ ಹೆಸರು ನಾಮಕರಣ ಮಾಡಲು ಸಚಿವ ಜಿ ಈ ಟ್ರಸ್ಟ್ ಕಾರ್ಯಕ್ಕೂ ಕನ್ನಡ ವಿಶ್ವವಿದ್ಯಾಲಯಕ್ಕೂ ಏನು ಸಂಬಂಧ ? ಈ ಟ್ರಸ್ಟ್ ಅಭಿವೃದ್ಧಿಯಾದ ನಂತರ ಈ ಟ್ರಸ್ಟ್ ಕನ್ನಡ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುತ್ತೇವೆ ಎಂದು ಹೇಳಲಾಗು ತ್ತಿದೆ. ಕನ್ನಡ ವಿಶ್ವ ವಿದ್ಯಾಲಯದ ಕೆಲಸವೇ ಬೇರೆ ಇರಬೇಕಾದರೆ ಈ ವಸ್ತು ಪ್ರದರ್ಶನ, ಪ್ರತಿಮೆ ತೆಗೆದುಕೊಂಡು ಇರುವ ಕೆಲಸ ಬಿಟ್ಟು ಅದನ್ನು ನಿರ್ವಹಿಸುವ ಕೆಲಸ ಮಾಡುವುದೇ ಕನ್ನಡ ವಿಶ್ವವಿದ್ಯಾಲಯದ ಉದ್ದೇಶಗಳಿಗೆ ಬಗೆದ ಅಪಚಾರವಾಗಿದೆ.
ಕನ್ನಡ ವಿಶ್ವವಿದ್ಯಾಲಯದ ಮೂಲ ಉದ್ದೇಶವನ್ನೇ ಸರ್ಕಾರ ಮರೆತು ಬಿಟ್ಟಿದೆಯೇ ? ಬಿಜೆಪಿ ಆಳುವ ಪಕ್ಷದ ರಾಜಕಾರಣಿಗಳು ಹಾಗೂ ಹೊಟೇಲ್ ಉದ್ಯಮಿಗಳು ಹಾಗೂ ಸಂಘ-ಪರಿವಾರಕ್ಕೆ ಸೇರಿದವರೇ ತುಂಬಿದ್ದಾರೆ. ಇತಿಹಾಸದ ಹೆಸರಾಂತ ವಿದ್ವಾಂಸರಾಗಲಿ, ತಜ್ಞರಾಗಲಿ ಸದರಿ ಟ್ರಸ್ಟ್ನಲ್ಲಿ ಇಲ್ಲ. ಇದೊಂದು `ಹಿಡೆನ್ ಅಜೆಂಡಾ‘ ಆಗಿದೆ. ಇದು ಕನ್ನಡ ವಿವಿಯ 80 ಏಕರೆ ಭೂಕಬಳಿಕೆ ನಡೆಸುವ ಹುನ್ನಾರ ಹೊಂದಲಾಗಿದೆ. ಕನ್ನಡ ವಿವಿ ಯನ್ನು ವ್ಯಾಪಾರಿ ಕೇಂದ್ರವನ್ನಾಗಿ ಸುವ, ಧಾರ್ಮಿಕ ಬ್ರಾಹ್ಮಣ ಮೌಲ್ಯಗಳ ಮತೀಯ ಕೇಂದ್ರವನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆ. ಬಲಿ ಚಕ್ರವರ್ತಿಗೆ ಒಂದು ಹೆಜ್ಜೆ ಜಾಗ ಕೇಳಿ ವಾಮನಮೂರ್ತಿ ಕೊನೆಗೆ ಯಾವ ಜಾಗವೂ ಸಾಕಾಗದೇ ಬಲಿ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿದಂತೆ ಕೇವಲ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ಕಬಳಿಸುವ ಮೂಲಕ ಇಡೀ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನೇ ಅಲ್ಲಿಂದ ಎತ್ತಿ ಹಾಕುವ ಹುನ್ನಾರ ಹೊಂದಿದೆ.
ಹೋರಾಟಕ್ಕೆ ಕೈ ಜೋಡಿಸಲು ಮನ
ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಪ್ರದೇಶದ ಭೂಕಬಳಿಕೆ ವಿರುದ್ಧ ನಾಡಿನಾದ್ಯಂತ ಸಾಹಿತಿಗಳು, ಕಲಾವಿದರು,ಬುದ್ಧಿಜೀವಿಗಳು, ವಿಶ್ರಾಂತ ಕುಲಪತಿಗಳು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆ ಗಳು ಹಾಗೂ ರಾಜ್ಯ ರೈತ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿ, ಪ್ರತಿಭಟನೆ ನಡೆಸುತ್ತಿವೆ. ಹಿರೀಕರು ಮಾಡಿರುವ ಅಸ್ತಿಯನ್ನು ಉಳಿಸಿಕೊಳ್ಳಬೇಕು. ನಾಡು ನುಡಿಗಾಗಿ ರೂಪಿತವಾಗಿರುವ ಕನ್ನಡ ವಿವಿ ಉಳಿಸಬೇಕೆಂದು ತಮ್ಮ ಪ್ರತಿರೋಧ ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಪ್ರಗತಿಪರ, ಕನ್ನಡಪರ, ದಲಿತಪರ, ರೈತಪರ ಎಲ್ಲಾ ಸಂಘಟನೆಗಳು `ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ‘ ರಚಿಸಿಕೊಂಡು ಹೋರಾಟ ನಡೆಸಿವೆ. ಹೋರಾಟ ಮುಂದುವರೆಸಿವೆ.
-ಪರಶುರಾಮ ಕಲಾಲ್.
-ಸೌಜನ್ಯ: ಜನಶಕ್ತಿ