ಭಟ್ಕಳ: ತಾಲೂಕಿನ ಮುರುಡೇಶ್ವರದ ಬಸ್ತಿ ಉತ್ತರ ಕೊಪ್ಪ ಕ್ಕೆ ಹೋಗುವ ರಸ್ತೆಯ ಹತ್ತಿರ ಐಆರ್ಬಿ ಕಂಪನಿ ಈ ಹಿಂದೆ ಬಿಟ್ಟಿರುವ ರಸ್ತೆಯ ಕಾಮಗಾರಿ ಮಾಡಲು ಮಿಷನರಿಗಳನ್ನು ತೆಗೆದುಕೊಂಡು ಬಂದಿದ್ದು ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ, ಅಂಡರ್ ಪಾಸ್ ನಿರ್ಮಾಣದವರೆಗೆ ಯಾವುದೇ ರಸ್ತೆಯ ಕೆಲಸವನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಒತ್ತಾಯಿಸಿದರು.
ಉತ್ತರಕೊಪ್ಪ ಕೆ ಹೋಗುವ ರಸ್ತೆಯ ಮೇಲೆ ಅಂಡರ್ ಪಾಸ್ ನಿರ್ಮಿಸಬೇಕು ಅಂಡರ್ ಪಾಸ್ ನಿರ್ಮಿಸಿ ರಸ್ತೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಅಂತಾ ಸಾರ್ವಜನಿಕರು ತಿಳಿಸಿದರು.
ಆರ್ ಬಿ. ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್ ರವರು ಹಾಜರಿದ್ದು ಈಗಾಗಲೇ ನಾವು ಸರಕಾರಕ್ಕೆ ಬರೆದುಕೊಂಡಿದ್ದು ಅದು ಬಂದ ನಂತರ ಅಂಡರ್ ಪಾಸ್ ಮಾಡುತ್ತೇವೆ ಈಗ ಸದ್ಯಕ್ಕೆ ಈ ರಸ್ತೆಯನ್ನು ತುರ್ತು ರಿಪೇರಿ ಮಾಡುತ್ತೇವೆ ಅಂತ ಹೇಳಿದ್ದಕ್ಕೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂಡರ್ ಪಾಸ್ ಮಾಡದೆ ಈ ರಸ್ತೆ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ , ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅಪಘಾತಗಳಾಗುತ್ತಿದ್ದು, ಅವುಗಳನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಅಂಡರ್ ಪಾಸ್ ರಸ್ತೆ ಉತ್ತರ ಕೋಪಕ್ಕೆ ಸೇರುತ್ತಿದ್ದು ಇಲ್ಲಿ ಸುಮಾರು 30 ಗ್ರಾಮಗಳು ಇದ್ದು ಹೆಚ್ಚಿನವರು
ಕೃಷಿಕರಾಗಿದ್ದಾರೆ. ರಸ್ತೆಯ ಮೂಲಕ ಅಕ್ಕಪಕ್ಕದ ಶಾಲಾ ಮಕ್ಕಳು ಕೈಕಿಣಿ ಶಾಲೆಗೆ ಬರುತ್ತಿದ್ದಾರೆ ಅಂಡರ್ ಪಾಸ್ ಆಗದಿದ್ದರೆ ಶಾಲಾ ಮಕ್ಕಳಿಗೆ ತೊಂದರೆದಾಯಕವಾಗುತ್ತಿದೆ. ರಸ್ತೆಯನ್ನು ದಾಟಿ ಮೇಲ್ಬಾಗದಲ್ಲಿ ಸ್ಮಶಾನಗಳಿದ್ದು ಸ್ಮಶಾನಕ್ಕೆ ಹೋಗುವಾಗ ಚತುಸ್ಪದ ಹೆದ್ದಾರಿಯನ್ನು ದಾಟಿ ಹೋಗಬೇಕಾಗಿರುತ್ತದೆ.
ಹಳ್ಳಿಯ ಭಾಗದವರೆಲ್ಲರೂ ಇದೇ ರಸ್ತೆ ಮೂಲಕವಾಗಿ ತಮ್ಮ ದಿನ ನಿತ್ಯದ ಕೆಲಸಕ್ಕೆ ಈ ಹೆದ್ದಾರಿಯನ್ನು ದಾಟ ಬೇಕಾಗಿದ್ದ ರಿಂದ ಅಂಡರ್ ಪಾಸ್ ಅವಶ್ಯಕತೆ ಇರುತ್ತದೆ ಎಂದು ಪಟ್ಟು ಹಿಡಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಭಟ್ಕಳ ಸಹಾಯಕ ಆಯುಕ್ತೆ ಡಾ. ನಯನಾ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಮೊದಲು ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯಲಿ, ನಂತರ ಅಂಡರ್ ಪಾಸ್ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎನ್ನುತ್ತಿದ್ದಂತೆಯೇ ಆಕ್ರೋಶಗೊಂಡ ಜನರು 8 -10 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ, ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಅನುಮೋದನೆಯನ್ನೂ ನೀಡಿದೆ.
ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭಿಸಿಲ್ಲ. ಅದನ್ನು ಬಿಟ್ಟು ಕೊನೆ ಹಂತದಲ್ಲಿ ಕಾಮಗಾರಿ ಅರ್ಧಂಬರ್ಧ ಮುಗಿಸಿ ಹೋಗಲು ಬಂದಿದ್ದೀರಿ. ಅಂಡರ್ ಪಾಸ್ ನಿರ್ಮಿಸದೇ ಹೆದ್ದಾರಿ ಅಗಲೀಕರಣ ನಡೆಸಿದರೆ ಅಪಘಾತಗಳು ಹೆಚ್ಚುವುದಲ್ಲದೇ ಇದರಿಂದ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದರೆ ಅಂಡರ್ಪಾಸ್ ಹೊರತಾಗಿ ಇಲ್ಲಿ ಯಾವುದೇ ಕೆಲಸವನ್ನು ಮಾಡುವುದು ಬೇಡ ಎಂದು ಜನರು ಪಟ್ಟು ಹಿಡಿದರು. ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿ ಐಆರ್ಬಿ ಸಿಬ್ಬಂದಿ ಅಲ್ಲಿಂದ ತೆರಳಿದರು.