ಭಟ್ಕಳ, ಜನವರಿ 2:ಶುಕ್ರವಾರ ಸಂಜೆ ಮುರುಡೇಶ್ವರದ ಸಮುದ್ರ ಕಿನಾರೆಯಲ್ಲಿ ಮೀನುಗಾರಿಕೆ ತೆರಳಿಗೆ ವ್ಯಕ್ತಿಯೋರ್ವನು ಪಾತಿ ದೋಣಿ ಮುಗುಚಿಬಿದ್ದ ಪರಿಣಾಮವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯು ವರದಿಯಾಗಿದ್ದು ಪ್ರಕರಣವು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತ ವ್ಯಕ್ತಿಯನ್ನು ಮುರುಡೇಶ್ವರದ ಹಿರೆದುಂಬಿ ನಿವಾಸಿ ಸುಕ್ರು ನಾಗಪ್ಪ ಹರಿಕಂತ್ರ(35) ಎಂದು ಗುರುತಿಸಲಾಗಿದೆ. ಈತನು ಶುಕ್ರವಾರ ಸಂಜೆ ಪಾತಿದೋಣೀಯೊಂದರಲ್ಲಿ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದೆ ಎನ್ನಲಗಿದೆ. ಈ ಸಂದರ್ಭದಲ್ಲಿ ಭಾರಿ ಅಲೆಗಳ ಅರ್ಬಟಕ್ಕೆ ತುತ್ತಾಗಿ ದೋಣೀಯು ಮುಗುಚಿದೆ ಎನ್ನಲಾಗಿದೆ. ಗಾಬರಿಗೊಂಡ ಈತನು ಬಲೆಯನ್ನು ನೀರಿಗೆ ಎಸೆಯು ಸಂದರ್ಭದಲ್ಲಿ ಬಲೆಯು ಆತನ ದೇಹವನ್ನು ಸುತ್ತಿಕೊಂಡಿತು ಎನ್ನಲಗಿದ್ದು ಈದರಿಂದಾಗಿ ಈಜಲು ತೊಂದರೆಯಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ