ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೂಡಿಗೆರೆ : ನೀರಿಗಾಗಿ ಉಪವಾಸ - ತಾಲ್ಲೂಕು ಆಡಳಿತ ಮಂಡಳಿ ನೀಡಿದ ಗಡುವು ಮುಕ್ತಾಯ

ಮೂಡಿಗೆರೆ : ನೀರಿಗಾಗಿ ಉಪವಾಸ - ತಾಲ್ಲೂಕು ಆಡಳಿತ ಮಂಡಳಿ ನೀಡಿದ ಗಡುವು ಮುಕ್ತಾಯ

Sat, 19 Dec 2009 09:50:00  Office Staff   S.O. News Service
ಚಿಕ್ಕಮಗಳೂರು, ಡಿಸೆಂಬರ್ 18: ಮೂಡಿಗೆರೆ ಪಟ್ಟಣದ ಹೊರವಲಯದ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಬಾಪುನಗರದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೋರಿ ಶನಿವಾರದಿಂದ ತಾಲ್ಲೂಕು ಕಛೇರಿ ಎದುರು ಅನಿರ್ದಿಷ್ಟವಧಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಆಚಾರ್ಯ, ಕಾರ್ಯದರ್ಶಿ ಎಂ.ಎ. ಸಲಾವುದ್ದೀನ್ ಮತ್ತು ಮೂರ್ತಿ ಎಂಬುವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
ಈ ಕುರಿತು ತಿಂಗಳ ಹಿಂದೆ ತಾಲ್ಲೂಕು ಆಡಳಿತದ ಗಮನ ಸೆಳೆಯಲಾಗಿತ್ತು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಶೀಘ್ರವೇ ಸಮಸ್ಯೆ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ತಾವು ಕೊಟ್ಟಿದ್ದ ಗಡುವು ಮೀರಿದ್ದರು ಕೆಲಸವಾಗದ ಹಿನ್ನಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಸಮಿತಿ ತಿಳಿಸಿದೆ. 


Share: