ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮುರ್ಡೇಶ್ವರ: ಮಹಾಶಿವರಾತ್ರಿ ಆಚರಣೆಗೆ ಮುರುಡೇಶ್ವರಕ್ಕೆ ಹರಿದು ಬಂದ ಜನಸಾಗರ

ಮುರ್ಡೇಶ್ವರ: ಮಹಾಶಿವರಾತ್ರಿ ಆಚರಣೆಗೆ ಮುರುಡೇಶ್ವರಕ್ಕೆ ಹರಿದು ಬಂದ ಜನಸಾಗರ

Sun, 14 Feb 2010 18:57:00  Office Staff   S.O. News Service

ಮುರ್ಡೇಶ್ವರ, ಫೆಬ್ರವರಿ 14:  ಮಹಾಶಿವರಾತ್ರಿಯ ನಿಮಿತ್ತ ವಿಶ್ವಪ್ರಸಿದ್ಧ ಮುರುಡೇಶ್ವರಕ್ಕೆ ಜನಸಾಗರವೇ ಹರಿದು ಬಂದಿದೆ.

 12vd3.jpg

ಉಪವಾಸ ವೃತವನ್ನು ಆಚರಿಸಿದ ಸಾವಿರಾರು ಭಕ್ತಾದಿಗಳು ಶುಕ್ರವಾರ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಅಭಿಷೇಕ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರುದ್ರಾಭಿಷೇಕ, ಪಂಚಾಮೃತಾಭಿಷೇಕಗಳು ಈಶ್ವರನಿಗೆ ಮಂತ್ರಘೋಷಗಳೊಂದಿಗೆ ಸಮರ್ಪಿತವಾದವು.

 

 

12vd2.jpg 

 

ಶುಕ್ರವಾರ ಬೆಳಿಗ್ಗೆ 5.30 ಗಂಟೆಯಿಂದಲೇ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಗಿದ್ದು, ಬೆಳಿಗ್ಗೆ ೧೦ ಗಂಟೆಯವರೆಗೆ ವಿರಳವಾಗಿದ್ದ ಜನಸಂಖ್ಯೆ ಮಧ್ಯಾಹ್ನದ ವೇಳೆಗೆ ಏರಿಕೆಯನ್ನು ಕಂಡಿತು. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಪ್ರವಾಸಿಗರು ವಿಶ್ವಪ್ರಸಿದ್ಧ ಶಿವನ ಸನ್ನಿಧಿಯಲ್ಲಿ ನಿಂತು ಪುಳಕಗೊಂಡರು. ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಮನಾರ್ಹವಾಗಿತ್ತು.

 

 

12vd5.jpg

 

 

ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಅಲಂಕೃತಗೊಂಡ ಸ್ವರ್ಣರಥ ಸಂಚಾರವು ಶಿವರಾತ್ರಿ ಆಚರಣೆಗೆ ಮೆರುಗನ್ನು ನೀಡಿತು. ಶನಿವಾರವೂ ಭಕ್ತ ಸಮೂಹ ದೇವಸ್ಥಾನದಲ್ಲಿ ಸೇರುವ ನಿರೀಕ್ಷೆ ಇದೆ.


Share: