ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಆಯುಷ್ ಜಿಲ್ಲಾ ಆಸ್ಪತ್ರೆಗೆ ೫೦ ಲಕ್ಷ ರೂ. ಹೆಚ್ಚಿನ ಅನುದಾನ ರಾಜ್ಯ ಆಯುಷ್ ನಿರ್ದೇಶಕ ಜಿ. ಎನ್. ಶ್ರೀಕಂಠಯ್ಯ

ಆಯುಷ್ ಜಿಲ್ಲಾ ಆಸ್ಪತ್ರೆಗೆ ೫೦ ಲಕ್ಷ ರೂ. ಹೆಚ್ಚಿನ ಅನುದಾನ ರಾಜ್ಯ ಆಯುಷ್ ನಿರ್ದೇಶಕ ಜಿ. ಎನ್. ಶ್ರೀಕಂಠಯ್ಯ

Mon, 03 May 2010 15:24:00  Office Staff   S.O. News Service

ಮಂಗಳೂರು, ಮೇ ೩: ಜಿಲ್ಲೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಜನಪ್ರಿಯವಾಗಿದ್ದು, ಈ ಪದ್ಧತಿಯ ಬೆಳವಣಿಗೆಗೆ ಅಗತ್ಯ ಸೌಕರ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ೫೦ ಲಕ್ಷ ರೂ.ಗಳ ಹೆಚ್ಚುವರಿ ಅನುದಾನವನ್ನು ಒದಗಿಸಲಾಗುವುದು ಎಂದು ರಾಜ್ಯ ಆಯುಷ್ ನಿರ್ದೇಶಕರಾದ  ಜಿ. ಎನ್. ಶ್ರೀಕಂಠಯ್ಯ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಈ ಬಗ್ಗೆ ವಿಚಾರ ವಿನಿಮಯ ನಡೆಸಿದ ಅವರು, ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗವನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಅಯುಷ್ ಅಧಿಕಾರಿ ಡಾ.ಸದಾಶಿವಾನಂದ್ ಉಪಸ್ಥಿತರಿದ್ದರು.


Share: