ಬಂಟ್ವಾಳ ; ಮಕ್ಕಳ ಮಾಸೋತ್ಸವ ನಿರ್ಣಯಗಳ ಅನುಷ್ಠಾನ ಸಮಿತಿ ಇದರ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಸಂಚಲನ ಜಾಥಾ ವಾಹನಕ್ಕೆ ಸೋಮವಾರ ಫರಂಗಿಪೇಟೆಯ ಪುದುಮಾಪ್ಳ ಶಾಲೆಯಲ್ಲಿ ಸ್ವಾಗತ ಕೋರಲಾಯಿತು. ಈ ಸಂದರ್ಭ ಜಿ.ಪಂ ಸದಸ್ಯ ಉಮ್ಮರ್ ಫಾರೂಕ್, ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಉಮೇಶ್ ನಿರ್ಮಲ್, ಮಂಜು ವಿಟ್ಲ,ಮೌನೆಶ್ ವಿಶ್ವಕರ್ಮ,ಸಂದೀಪ್ ಬಂಟ್ವಾಳ, ಕ್ಷೇತ್ರ ಸಂಯೋಜಕ ಧರ್ಣಪ್ಪ, ಮಹಮ್ಮದ್ ಮಾರಿಪಳ್ಳ, ಜಾಥಾ ಸಂಚಾಲಕ ಸುರೇಶ್ ಬಾಳಿಲ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು, ಮುಖ್ಯ ಗುರುಗಳು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.