ಭಟ್ಕಳ: ಮಾನ್ಯ ಸಹಾಯಕ ಆಯುಕ್ತರು, ಭಟ್ಕಳ ಇವರ ನಿರ್ದೇಶನದಂತೆ ಭಟ್ಕಳದಲ್ಲಿ ಸೋಮವಾರ ಸಾಯಂಕಾಲದ ನಂತರ ಮಳೆಯ ಪ್ರಭಾವವು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ಸಲುವಾಗಿ ನಾಳೆ ಜುಲೈ 9 ರಂದು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಪ್ರಕಣೆಯಲ್ಲಿ ತಿಳಿಸಿದ್ದಾರೆ.