ಬೆಂಗಳೂರು, ಏಪ್ರಿಲ್ ೨೭, ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ೬ ನೇ ತರಗತಿಯ ಪ್ರವೇಶಕ್ಕಾಗಿ ಮೇ ೧೦ ರಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಂಗಳೂರು - ೫೨ ಇಲ್ಲಿ ಕೌನ್ಸಿಲಿಂಗನ್ನು ನಡೆಸಲಾಗುವುದು.
ಕೌನ್ಸಿಲಿಂಗ್ ಸಂದರ್ಭದಲ್ಲಿ ವಿದ್ಯಾರ್ಥಿಗಳು, ೨೦೦೯-೧೦ ನೇ ಸಾಲಿನ ಜಾತಿ ಪ್ರಮಾಣ ಪತ್ತ, ಆದಾಯ ಪ್ರಮಾಣ ಪತ್ರ. ೫ ನೇ ತರಗತಿ ತೇರ್ಗಡೆಯಾಗಿರುವ ಶಾಲಾ ಮುಖ್ಯೋಪಾಧ್ಯಾಯರಿಂದ ದೃಡೀಕರಿಸಿದ ಅಂಕಪಟ್ಟಿ, ಮೊದಲಾದ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
ಆಯ್ಕೆಯಾದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಸತಿ ಶಾಲೆಗೆ ಮೇ ೨೦ ರೊಳಗೆ ದಾಖಲಾಗಬೇಕು. ದಾಖಲಾತಿ ಸಂದರ್ಭದಲ್ಲಿ ೫ ನೇ ತರಗತಿಯ ವರ್ಗಾವಣೆ ಪತ್ರ ಹಾಗೂ ಇತ್ತೀಚಿನ ಎರಡು ಭಾವಚಿತ್ರವನ್ನು ಆಯ್ಕೆಯಾದ ವಸತಿ ಶಾಲೆಯ ಪ್ರಾಂಶುಪಾಲರಿಗೆ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು, ಜಿಲ್ಲಾ ಮಟ್ಟದ ಪ್ರವೇಶ ಪರೀಕ್ಷಾ ಸಮಿತಿ, ಬೆಂಗಳೂರು ನಗರ ಜಿಲ್ಲೆ ಇವರನ್ನು ಸಂಪರ್ಕಿಸಬಹುದಾಗಿದೆ.