ಹೊಸದಿಲ್ಲಿ, ಸೆ.30: ಏರ್ಇಂಡಿಯಾ ಪೈಲಟ್ಗಳು ತಮ್ಮ ಐದು ದಿನಗಳ ಮುಷ್ಕರವನ್ನು ಹಿಂದೆಗೆದು ಕೆಲಸಕ್ಕೆ ಮರಳಲಾರಂಭಿಸಿದ್ದು, ಎಲ್ಲ ವಿಮಾನ ಹಾರಾಟಗಳು ಇಂದು ರಾತ್ರಿಯಿಂದ ಸಾಮಾನ್ಯದತ್ತ ಮರಳುವ ನಿರೀಕ್ಷೆಯಿದೆ.
ಈಗಾಗಲೇ ರದ್ದುಗೊಳಿಸಲ್ಪಟ್ಟಿರುವ ಬುಕಿಂಗ್ ವ್ಯವಸ್ಥೆಯೂ ಶೀಘ್ರವೇ ಪುನಾರಂಭವಾಗಲಿದೆಯೆಂದು ಏರ್ ಇಂಡಿಯಾ ಕಾರ್ಯಕಾರಿ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ಪೈಲಟ್ಗಳು ಮರಳಿ ಕೆಲಸಕ್ಕೆ ಬರತೊಡಗಿದ್ದಾರೆ. ಆದಾಗ್ಯೂ ಕೆಲವು ವಿಮಾನಗಳು ಅಮಾನತಿಯಲ್ಲಿಯೇ ಉಳಿಯಲಿವೆ. ಕಾರ್ಯಾಚರಣೆ ರಾತ್ರಿಯೊಳಗೆ ಸಾಮಾನ್ಯಕ್ಕೆ ಮರಳಬಹುದೆಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯಧಿಕಾರಿ ಹೇಳಿದರು. ಪರಿಸ್ಥಿತಿಯನ್ನು ಸುಧಾರಿಸಲು ವಿಮಾನ ಸಂಸ್ಥೆಯು ದೇಶಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ನೌಕರರನ್ನು ನಿಯೋಜಿಸಿದೆ.
ಪೈಲಟ್ಗಳ ಮುಷ್ಕರದಿಂದಾಗಿ ಪ್ರಯಾಣಿಕರಿಗಾಗಿರುವ ತೊಂದರೆಗೆ ತಾವು ವಿಷಾಧಿಸುತ್ತೇವೆ. ಯಾವುದೇ ದೂರುಗಳಿದ್ದಲ್ಲಿ ಅವರು ನಿಲ್ದಾಣಗಳ ಕೌಂಟರ್ಗಳಿಗೆ ಭೇಟಿ ನೀಡಬಹುದು ಎಂದು ಅಧಿಕಾರಿ ತಿಳಿಸಿದರು.
ವೇತನ ಕಡಿತ ಮಾಡುವುದಿಲ್ಲವೆಂದು ನಾಗರಿಕ ವಿಮಾನಯಾನ ಸಚಿವಾಲಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೈಲಟ್ಗಳು ತಮ್ಮ ಐದು ದಿನಗಳ ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ.
ಈ ಬಗ್ಗೆ ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ರ ಕಚೇರಿ ಹಾಗೂ ಸ್ವತಃ ಅವರೇ ಅಧಿಕೃತ ಭರವಸೆ ನೀಡಿರುವುದರಿಂದ ತಕ್ಷಣವೇ ಮುಷ್ಕರ ನಿಲ್ಲಿಸಿದ್ದೇವೆಂದು ಮುಷ್ಕರದ ನೇತೃತ್ವ ವಹಿಸಿದ್ದ ಹಿರಿಯ ಕಾರ್ಯಕಾರಿ ಪೈಲಟ್ ಕ್ಯಾಪ್ಟನ್ ವಿ.ಕೆ. ಭಲ್ಲಾ ತಿಳಿಸಿದರು.
ಸರಕಾರದ ಭರವಸೆ ನಂಬದಿರಲು ತಮಗೆ ಕಾರಣಗಳಿಲ್ಲ. ತಾಗ ಆಡಳಿತದೊಂದಿಗೆ ಸಂಪೂರ್ಣ ಸಹಕರಿಸಲು ನಿರ್ಧರಿಸಿದ್ದೇವೆ. ಪ್ರಯಾಣಿಕರಿಗಾದ ತೊಂದರೆಗೆ ವಿಷಾಧಿಸುತ್ತೇವೆ. ಭಲ್ಲಾ ಸರಕಾರಕ್ಕಿಂತ ದೊಡ್ಡವನಲ್ಲ ಎಂದವರು ಹೇಳಿದರು.
ವೇತನ ಕಡಿತದ ಹಿನ್ನೆಲೆಯಲ್ಲಿ ಏರ್ಇಂಡಿಯಾ ಪೈಲಟ್ಗಳು ಕಳೆದ ಶನಿವಾರದಿಂದ ಮುಷ್ಕರ ನಡೆಸುತ್ತಿದ್ದರು.
ಈಗಾಗಲೇ ರದ್ದುಗೊಳಿಸಲ್ಪಟ್ಟಿರುವ ಬುಕಿಂಗ್ ವ್ಯವಸ್ಥೆಯೂ ಶೀಘ್ರವೇ ಪುನಾರಂಭವಾಗಲಿದೆಯೆಂದು ಏರ್ ಇಂಡಿಯಾ ಕಾರ್ಯಕಾರಿ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ಪೈಲಟ್ಗಳು ಮರಳಿ ಕೆಲಸಕ್ಕೆ ಬರತೊಡಗಿದ್ದಾರೆ. ಆದಾಗ್ಯೂ ಕೆಲವು ವಿಮಾನಗಳು ಅಮಾನತಿಯಲ್ಲಿಯೇ ಉಳಿಯಲಿವೆ. ಕಾರ್ಯಾಚರಣೆ ರಾತ್ರಿಯೊಳಗೆ ಸಾಮಾನ್ಯಕ್ಕೆ ಮರಳಬಹುದೆಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯಧಿಕಾರಿ ಹೇಳಿದರು. ಪರಿಸ್ಥಿತಿಯನ್ನು ಸುಧಾರಿಸಲು ವಿಮಾನ ಸಂಸ್ಥೆಯು ದೇಶಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ನೌಕರರನ್ನು ನಿಯೋಜಿಸಿದೆ.
ಪೈಲಟ್ಗಳ ಮುಷ್ಕರದಿಂದಾಗಿ ಪ್ರಯಾಣಿಕರಿಗಾಗಿರುವ ತೊಂದರೆಗೆ ತಾವು ವಿಷಾಧಿಸುತ್ತೇವೆ. ಯಾವುದೇ ದೂರುಗಳಿದ್ದಲ್ಲಿ ಅವರು ನಿಲ್ದಾಣಗಳ ಕೌಂಟರ್ಗಳಿಗೆ ಭೇಟಿ ನೀಡಬಹುದು ಎಂದು ಅಧಿಕಾರಿ ತಿಳಿಸಿದರು.
ವೇತನ ಕಡಿತ ಮಾಡುವುದಿಲ್ಲವೆಂದು ನಾಗರಿಕ ವಿಮಾನಯಾನ ಸಚಿವಾಲಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೈಲಟ್ಗಳು ತಮ್ಮ ಐದು ದಿನಗಳ ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ.
ಈ ಬಗ್ಗೆ ನಾಗರಿಕ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ರ ಕಚೇರಿ ಹಾಗೂ ಸ್ವತಃ ಅವರೇ ಅಧಿಕೃತ ಭರವಸೆ ನೀಡಿರುವುದರಿಂದ ತಕ್ಷಣವೇ ಮುಷ್ಕರ ನಿಲ್ಲಿಸಿದ್ದೇವೆಂದು ಮುಷ್ಕರದ ನೇತೃತ್ವ ವಹಿಸಿದ್ದ ಹಿರಿಯ ಕಾರ್ಯಕಾರಿ ಪೈಲಟ್ ಕ್ಯಾಪ್ಟನ್ ವಿ.ಕೆ. ಭಲ್ಲಾ ತಿಳಿಸಿದರು.
ಸರಕಾರದ ಭರವಸೆ ನಂಬದಿರಲು ತಮಗೆ ಕಾರಣಗಳಿಲ್ಲ. ತಾಗ ಆಡಳಿತದೊಂದಿಗೆ ಸಂಪೂರ್ಣ ಸಹಕರಿಸಲು ನಿರ್ಧರಿಸಿದ್ದೇವೆ. ಪ್ರಯಾಣಿಕರಿಗಾದ ತೊಂದರೆಗೆ ವಿಷಾಧಿಸುತ್ತೇವೆ. ಭಲ್ಲಾ ಸರಕಾರಕ್ಕಿಂತ ದೊಡ್ಡವನಲ್ಲ ಎಂದವರು ಹೇಳಿದರು.
ವೇತನ ಕಡಿತದ ಹಿನ್ನೆಲೆಯಲ್ಲಿ ಏರ್ಇಂಡಿಯಾ ಪೈಲಟ್ಗಳು ಕಳೆದ ಶನಿವಾರದಿಂದ ಮುಷ್ಕರ ನಡೆಸುತ್ತಿದ್ದರು.