ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಅಂಕೋಲ ಬಳಿ ಭೀಕರ ಅಪಘಾತ - ಉಪ್ಪುಂದದ ನಾಲ್ವರ ಸಾವು

ಅಂಕೋಲ ಬಳಿ ಭೀಕರ ಅಪಘಾತ - ಉಪ್ಪುಂದದ ನಾಲ್ವರ ಸಾವು

Sat, 13 Feb 2010 02:57:00  Office Staff   S.O. News Service

ಅಂಕೋಲ, ಫೆಬ್ರವರಿ ೧೨, ಅಂಕೋ ರಾ.ಹೆ.೬೩ ರ ಸಂಕಸಾರ ಎಂಬಲ್ಲಿ ಮದ್ಯಾಹ್ನ ಮೂರು ಗಂಟೆಗೆ ಅದಿರು ಲಾರಿ ಮತ್ತು ಕಾರ್ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಕುಂದಾಪುರ ತಾಲೂಕಿನ ಉಪ್ಪುಂದದ ನಾಲ್ವರು ಸಾವಿಗೀಡಾದ ಘಟನೆ ಜರುಗಿದೆ.

 

13-ank2.jpg

 

ಮೃತರನ್ನು ಉಪ್ಪುಂದದ ನಿವಾಸಿಗಳಾದ ರಿತೀಶ ಭೋಜಯ್ಯ ಶೆಟ್ಟಿ(೮) ಈಕೆಯ ತಾಯಿ ಸುಲಕ್ಷಣ ಭೋಜಯ್ಯ ಶೆಟ್ಟಿ(೩೨) ಸುಜಾತ ಬಾಳಕೃಷ್ಣ (೩೯) ಹಾಗೊ ಕಾರು ಚಾಲಕ ನಾಗೇಶ ಬಡಿಗೇರ್(೩೫) ಎಂದು ಗುರುತಿಸಲಾಗಿದೆ.

 

 

13-ank3.jpg 

ಇವರು ಧಾರಡವಾದಲ್ಲಿ ನಡೆಯುವ ಶಿವರಾತ್ರಿ ಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಬೆಳಗ್ಗೆ ಉಪ್ಪುಂದದಿಂದ ಧಾರವಾಡಕ್ಕೆ ಹೋಗುತ್ತಿದ್ದರು ಎನ್ನಲಾಗಿದ್ದು ಈ ಸಂದರ್ಭದಲ್ಲಿ ಅಂಕೋಲದ ಸಂಕಸಾರ ಎಂಬಲ್ಲಿ ಎದುರಿನಿಂದ ಬಂದ ಅದಿರು ಲಾರಿಯು ಡಿಕ್ಕಿ ಹೊಡೆದು ಈ ಅಪಘಾತ ಜರುಗಿದೆ ಎನ್ನಲಗಿದೆ. 

 


Share: