ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ದಿನಸಿ ಅಂಗಡಿಯಲ್ಲಿ ಬೆಂಕಿ - ಎರೆಡೂವರೆ ಲಕ್ಷ ರೂ ಸೊತ್ತು ನಾಶ

ಭಟ್ಕಳ: ದಿನಸಿ ಅಂಗಡಿಯಲ್ಲಿ ಬೆಂಕಿ - ಎರೆಡೂವರೆ ಲಕ್ಷ ರೂ ಸೊತ್ತು ನಾಶ

Sat, 13 Feb 2010 19:11:00  Office Staff   S.O. News Service

ಭಟ್ಕಳಫೆಬ್ರವರಿ ೧೩, ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ತ ವ್ಯಾಪ್ತಿಯ ತೆಂಗಿನಗುಂಡಿ ಮುಖ್ಯ ರಸ್ತೆಯಲ್ಲಿರುವ ನಮಸ್ತೆ ಜನರಲ್ ಸ್ಟೋರ್ ದಿನಸಿ ಅಂಗಡಿಯಲ್ಲಿ ರಾತ್ರಿ ಸಮಯ ಒಳಗಿಂದಲೆ ಬೆಂಕಿ ಬಿದ್ದು ಸುಮಾರು ೨.೫೦ ಲಕ್ಷ ರೂ ಹಾನಿ ಸಂಭವಿಸಿದೆ. ಈ ಅಂಗಡಿಯು ಲಕ್ಷಣ ನಾಗಪ್ಪ ನಾಯ್ಕ ಎಂಬುವವರಿಗೆ ಸೇರಿದ್ದಾಗಿದ್ದು ಇವರು ಶುಕ್ರವಾರ ರಾತ್ರಿ ಸುಮಾರು ೧೦.೩೦ಕ್ಕೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಿದ್ದು ಶನಿವಾರ ಬೆಳಗ್ಗೆ ಎಂದಿನಂತೆ ಅಂಗಡಿಯನ್ನು ತೆಗೆಯಲು ಬಂದಾಗ ಈ ಅನಾಹುತ ಸಂಭವಿಸಿದ್ದು ಅವರ ಗಮನಕ್ಕೆ ಬಂದಿದೆ.

 

 13-bkl3.jpg

ಅಂಗಡಿಯಲ್ಲಿ ಒಂದು ಫ್ರಿಡ್ಜ್ ಸೇರಿದಂತೆ ಮಾರಾಟ ಮಾಡಲು ಇರುವ ಅಕ್ಕಿ ಗೋದಿ, ಸಕ್ಕರೆ ಮತ್ತಿರ ವಸ್ತುಗಳು ಸಂಪೂರ್ಣ ಸುಟ್ಟುಹೋಗಿವೆ. ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ತನಿಖೆಯ ಬಳಿಕವಷ್ಟೇ ಇದರ ಸತ್ಯಾಸತ್ಯತೆ ತಿಳಿಯಬಹುದಾಗಿದೆ.


Share: