ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕಾರ್ಪೋರೇಶನ್ ಬ್ಯಾಂಕ್ ಅಧ್ಯಕ್ಷ ಜೆ.ಎಂ.ಗರ್ಗ್ ರಿಗೆ ಡಾ. ಎಂ. ವಿಶ್ವೇಶ್ವರಯ್ಯ ಪರಿಸರ ರತ್ನ-2009 ಪ್ರಶಸ್ತಿ

ಮಂಗಳೂರು: ಕಾರ್ಪೋರೇಶನ್ ಬ್ಯಾಂಕ್ ಅಧ್ಯಕ್ಷ ಜೆ.ಎಂ.ಗರ್ಗ್ ರಿಗೆ ಡಾ. ಎಂ. ವಿಶ್ವೇಶ್ವರಯ್ಯ ಪರಿಸರ ರತ್ನ-2009 ಪ್ರಶಸ್ತಿ

Wed, 07 Oct 2009 02:53:00  Office Staff   S.O. News Service
ಮಂಗಳೂರು, ಅ.5: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ಕಾಮನ್ ವೆಲ್ತ್  ಶಿಕ್ಷಣ ಹಾಗೂ ಮಾನಯತಾ ಅಧ್ಯಯನ(ಎಸಿಡಬ್ಲೂ‌ಇ‌ಎಚ್‌ಸಿ) ದಿಂದ ಕೊಡಲಾಗುವ ‘ಡಾ.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಪರಿಸರ ರತ್ನ-2009’ ಪ್ರಶಸ್ತಿಗೆ ಕಾರ್ಪೋರೇಶನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೆ.ಎಮ್.ಗರ್ಗ್ ಭಾಜಕರಾಗಿದ್ದಾರೆ. 

ಈ ಪ್ರಶಸ್ತಿಯನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಬಿ.ಎಸ್.ಶೇರಿಗಾರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಎಸಿಡಬ್ಲೂ‌ಇ‌ಎಚ್‌ಸಿಯ ಅಧ್ಯಕ್ಷ ಸಿ.ಜಗನ್ನಾಥ್,  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು, ರಾಷ್ಟ್ರೀಯ ಪರಿಸರ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಪುಟ್ಟಯ್ಯ, ಜೆ.ಎಮ್.ಗರ್ಗ್‌ರ ಪತ್ನಿ ಮತ್ತಿತರರು ಉಪಸ್ಥಿತರಿದ್ದರು

Share: