ಕಾರವಾರ: ಪ್ರಸಕ್ತ ಸಾಲಿನ ವಿಕಲಚೇತನರ ಹೊಸ / ನವೀಕರಣ ರಿಯಾಯಿತಿ ಬಸ್ ಪಾಸ್ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿAದ ಪಡೆಯಲು ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜ.10 ರಿಂದ ಪ್ರಾರಂಭವಾಗಿದೆ.
ಅರ್ಹ ಅಭ್ಯರ್ಥಿಗಳು ವಿಕಲಚೇತನರ ಹೊಸ/ನವೀಕರಣ ಪಾಸ್ಗಳನ್ನು ಪಡೆಯಲು ಸೇವಾ ಸಿಂಧು ಆನ್ಲೈನ್ ಪೋರ್ಟಲ್ನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಸಂಬAಧಪಟ್ಟ ವಿಭಾಗ ಹಾಗೂ ಘಟಕವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ, ಸ್ವೀಕೃತಿಯನ್ನು ಸಂಸ್ಥೆಯ, ಸಂಬAಧಪಟ್ಟ ಪಾಸ್ ಕೌಂಟರ್ಗಳಲ್ಲಿ ಸಲ್ಲಿಸಿ, ವಿಕಲಚೇತನರ ಬಸ್ ಪಾಸ್ಗಳನ್ನು ಪಡೆಯಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.