ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಜಿಲ್ಲಾಮಟ್ಟದ ಐಪಿ‌ಎಲ್ ಮಾದರಿ ಕ್ರಿಕೇಟ್ ಟೋರ್ನಿ ಭಟ್ಕಳದ ಟಿಪ್ಪು ಸುಲ್ತಾನ್ ವಾರಿಯರ್‍ಸ್ ತಂಡದ ಅಭೂತಪೂರ್ವ ಗೆಲುವು.

ಭಟ್ಕಳ: ಜಿಲ್ಲಾಮಟ್ಟದ ಐಪಿ‌ಎಲ್ ಮಾದರಿ ಕ್ರಿಕೇಟ್ ಟೋರ್ನಿ ಭಟ್ಕಳದ ಟಿಪ್ಪು ಸುಲ್ತಾನ್ ವಾರಿಯರ್‍ಸ್ ತಂಡದ ಅಭೂತಪೂರ್ವ ಗೆಲುವು.

Tue, 09 Feb 2010 00:13:00  Office Staff   S.O. News Service

ಭಟ್ಕಳ, ಫೆಬ್ರವರಿ ೯, ಇಲ್ಲಿನ ಟಿಪ್ಪು ಸುಲ್ತಾನ್ ಯುತ್ ಅಸೋಸಿಯೇಶನ್ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಐಪಿ‌ಎಲ್ ಮಾದರಿಯ ೨೦:೨೦ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಂಘಟಕ ಟಿಪ್ಪು ಸುಲ್ತಾನ್ ವಾರಿಯರ್ ತಂಡ ಅಭೂತಪೂರ್ವ ಗೆಲುವನ್ನು ದಾಖಲಿಸಿತು. ನಗರದ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಮೈದಾನದಲ್ಲಿ ಭಾನುವಾರದಂದು ಜರುಗಿದ ಅಂತಿಮಾ ಪಂದ್ಯಾವಳಿಯ ಸೆಣಸಾಟದಲ್ಲಿ ಭಟ್ಕಳದ ಟಿಪ್ಪು ಸುಲ್ತಾನ್ ಹಾಗೂ ಭಟ್ಕಲ್ ಚಾಲೆಂಜರ್‍ಸ್ ನಡುವೆ ನಡೆದ ಬಿರುಸಿನ ಆಟದಲ್ಲಿ ಸುಲ್ತಾನ್ ವಾರಿಯರ್ ತಂಡವು ಚಾಲೆಂಜರ್‍ಸ್ ತಂಡವನ್ನು ೪ವಿಕೆಟ್ ಗಳ ಅಂತರದಿಂದ ಮಣಿಸುವುದರ ಮೂಲಕ ಟಿಪ್ಪು ಸುಲ್ತಾನ್ ಟ್ರೋಫಿ ಹಾಗೂ ನಗದು ರೂ ೨೦,೨೦೨ ನ್ನು ತನ್ನದಾಗಿಸಿಕೊಂಡಿತು.

 

 


tipu_sultan_trophy.jpg

ಟಾಸ್ ಗೆದ್ದು ಮೊದಲು ಬ್ಯಾಂಟಿಂಗನ್ನು ಆಯ್ಕೆ ಮಾಡಿಕೊಂಡಿದ್ದ ಚಾಲೆಂಜರ್‍ಸ್ ತಂಡವು ನಿಗದಿತ ೨೦ ಓವರ್ ಗಳಲ್ಲಿ ೮ ವಿಕೇಟ್ ನಷ್ಟಕ್ಕೆ ೧೫೮ರನ್ ಗಳ ಗುರಿಯನ್ನು ಮುಂದಿಟ್ಟಿತು. ನಂತರ ಬ್ಯಾಟಿಂಗ್ ಮಾಡಿದ ಸುಲ್ತಾನ್ ತಂಡವು ಭರ್ಜರಿಯಾಗಿ ಆಟವನ್ನು ಆರಂಭಿಸಿ ೧೭ ಓವರ್ ಗಳಲ್ಲಿ ಎಲ್ಲ ವಿಕೇಟ್ ಗಳನ್ನು ಪಡೆದು ನಿಗಧಿತ ಗುರಿಯನ್ನು ತಲುಪಿ ಗೆಲುವು ಸಾಧಿಸಿತು. ಸುಲ್ತಾನ್ ವಾರಿಯರ್ ತಂಡದ ಇಮ್ರಾನ್ ಲಂಕಾ ಮತ್ತು ನಸ್ರುಲ್ಲಾ ಅಸ್ಕರಿ ಜೋಡಿಯು ಭರ್ಜರಿ ಬ್ಯಾಟಿಂಗ್ ಮಾಡಿ ೧೩ ಬಾಲಿಂಗ್ ನಲ್ಲಿ ೪೦ ರನ್ ಗಳ ಸುರಿಮಳೆಗೈದು ಕ್ರಿಕೇಟ್ ಪ್ರೇಮಿಗಳ ಮನವನ್ನು ತಣಿಷಿದರು. ಈ ಪಂದ್ಯಾವಳಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿ ೧೮೦ ರನ್ ಗಳನ್ನು ಮಾಡಿದ ಆಪ್ಶನ್ ತಂಡದ ಇಮ್ರಾನ್ ಖತೀಬ್ ಉತ್ತಮ ಬ್ಯಾಟ್ಸ್ ಮನ್ ಮತ್ತು ಸುಲ್ತಾನ್ ವಾರಿಯರ್‍ಸ್ ನ ಷಹಾಬುದ್ದೀನ್ ರಿಗೆ ಉತ್ತಮ ಬೌಲರ್(ಎಸೆತಗಾರ) ಭಟ್ಕಲ್ ಚಾಲೆಂಜರ್‍ಸ್ ನ ಅಬ್ದುಲ್ ಗಫೂರ್ ಬೆಸ್ಟ್ ಫೀಲ್ಡರ್, ಮತ್ತು ಹಸ್ಸಾನ್ ರಮಝಾನ್ ರಿಗೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ, ಉತ್ತಮ ಬೌಲಿಂಗ್ ಮಾಡಿದ ಸುಲ್ತಾನ್ ವಾರಿಯರ್‍ಸ್ ನ ಷಹಾಬುದ್ದೀನ್ ರಿಗೆ ಪಂದ್ಯಾ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

 

 

 

tipu_sultan_trophy_7.jpg

tipu_sultan_trophy_8.jpg



 tipu_sultan_trophy_6.jpg

ಸಂಜೆ ನಡೆದ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್. ಸೈಯ್ಯದ್ ಅಬ್ದುಲ್ ಅಝೀಮ್ ಅಂಬಾರಿ ಭಾಗವಹಿಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದಲ್ಲಿ ಉತ್ತಮ ಕ್ರೀಡಾಂಗಣದ ಕೊರತೆಯಿದೆ ಇದಕ್ಕಾಗಿ ಅಂಜುಮನ್ ಕಾಲೇಜಿನ ಮೈದಾನದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ(ಸ್ಟೇಡಿಯಂ) ನಿರ್ಮಾಣ ಮಾಡುವ ಕುರಿತು ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ಶಾಸಕರ ನಿಧಿಯಿಂದ ೫ಲಕ್ಷ ರೂಗಳನ್ನು ಮಂಜೂರು ಮಾಡಲಾಗಿದೆ. ಅದಕ್ಕಾಗಿ ಈ ಸಂದರ್ಭದಲ್ಲಿ ಶಾಸಕ ಜೆ.ಡಿ.ನಾಯ್ಕರಿಗೆ ತಾವು ಅಂಜುಮನ್ ಸಂಸ್ಥೆಯಿಂದ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅಂಜುಮನ್ ನಿಂದ ಹೊರಬಂದ ವಿದ್ಯಾರ್ಥಿಗಳು ಕ್ರೀಢಾಂಗಣಕ್ಕಾಗಿ ಪರದಾಡುವ ಅವಶ್ಯಕತೆಯಿಲ್ಲ ಆದಷ್ಟು ಬೇಗನೆ ಅಂಜುಮನ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು. ಬಹುಮಾನ ವಿತರಕರಾಗಿ ಅಂಜುಮನ್ ಬಿಬಿ‌ಎ ಕಾಲೇಜಿನ ಪ್ರಾಂಶುಪಾಲ ಝಫರುಲ್ಲಾ ಕೊಕಟ್ನೂರು. ಅಂಜುಮನ್ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪಪ್ರಾಂಶುಪಾಲ ನಝೀರ್ ಆಹ್ಮದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲ್ತಾನ್ ಯುತ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಪುರಸಭೆಯ ಅಧ್ಯಕ್ಷರೂ ಆದ ಪರ್ವೇಝ್ ಕಾಶಿಮಜಿ ವಹಿಸಿದ್ದರು.

 


tipu_sultan_trophy_1.jpg

tipu_sultan_trophy_2.jpg

tipu_sultan_trophy_3.jpg

tipu_sultan_trophy_4.jpg


tipu_sultan_trophy_13.jpg

tipu_sultan_trophy_14.jpg

tipu_sultan_trophy_15.jpg


tipu_sultan_trophy_18.jpg

tipu_sultan_trophy_19.jpg

tipu_sultan_trophy_16.jpg

tipu_sultan_trophy_17.jpg

 


Share: