ಭಟ್ಕಳ: ಪಟ್ಟಣದ ಟ್ಯಾಕ್ಸಿ ಮಾಲಕರ ಹಾಗೂ ಚಾಲಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ
2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸರ್ಫರಾಜ್ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಈರ ನಾಯ್ಕ, ಉಪಾಧ್ಯಕ್ಷರಾಗಿ ಗಣೇಶ ಪದ್ಮಯ್ಯ ದೇವಡಿಗ, ಖಜಾಂಚಿಯಾಗಿ ನಾರಾಯಣ ತಿಮ್ಮಯ್ಯ ನಾಯ್ಕ, ಸಹಕಾರ್ಯದರ್ಶಿಯಾಗಿ ಅಬ್ದುಲ್ ಸಮಿ ಶೇಖ್, ಸಹ ಖಜಾಂಚಿಯಾಗಿ ಮೊಹಮ್ಮದ್ ಮುಸ್ತಾಕ್, ಸದಸ್ಯರುಗಳಾಗಿ ಶ್ರೀಧರ ಮಾದೇವ ನಾಯ್ಕ, ಮೊಹಮ್ಮದ್ ಅಲಿ ಶೇಖ್, ರಿಯಾಜ್ ಅಹಮದ್ ಶೇಖ್, ಪಾಂಡುರಂಗ ವೆಂಕ್ಟಯ್ಯ ನಾಯ್ಕ, ಜಯಂತ ಬಲೀಂದ್ರ ನಾಯ್ಕ, ರಮೇಶ ಮಂಜಪ್ಪ ನಾಯ್ಕ, ಫೈರೋಜ ಹುಸೇನ್ ಸಾಬ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ ನಾಯ್ಕ, ಸಂಘದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.