ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಂಡೀಗಢ/ಚೆನ್ನೈ: ಬಾಬ್ರಿ ಮಸೀದಿ ಧ್ವಂಸಕ್ಕೆ ಪಶ್ಚಾತ್ತಾಪವಿಲ್ಲ :- ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಚಂಡೀಗಢ/ಚೆನ್ನೈ: ಬಾಬ್ರಿ ಮಸೀದಿ ಧ್ವಂಸಕ್ಕೆ ಪಶ್ಚಾತ್ತಾಪವಿಲ್ಲ :- ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

Sun, 06 Dec 2009 02:41:00  Office Staff   S.O. News Service
ಚಂಡೀಗಢ/ಚೆನ್ನೈ: ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಕ್ಕಾಗಿ ಸಂಘ ಪರಿವಾರ ಪಶ್ಚಾತ್ತಾಪ ಪಡುವ ಪ್ರಶ್ನೆಯೇ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬ್ರಿ ಮಸೀದಿ ಧ್ವಂಸವಾಗಿದ್ದು ಯಾವುದೇ ಒಳ ಸಂಚಿನಿಂದಲ್ಲ, ಆ ಕ್ಷಣದಲ್ಲಿ ಕರಸೇವಕರು ಸ್ವಯಂಪ್ರೇರಿತವಾಗಿ ಮಾಡಿದ ಕೆಲಸ ಅದು. ಇದಕ್ಕಾಗಿ ಸಂಘ ಪರಿವಾರ ಪಶ್ಚಾತ್ತಾಪ ಪಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ, 1992 ರ ಬಾಬ್ರಿ ಮಸೀದಿ ಧ್ವಂಸ ಪೂರ್ವಯೋಜಿತವಲ್ಲ ಎಂದು ವಿ‌ಎಚ್‌ಪಿ ಮುಖ್ಯಸ್ಥ ಅಶೋಕ್ ಸಿಂಘಾಲ್ ಹೇಳಿದ್ದಾರೆ.

ಸೌಜನ್ಯ : ಕನ್ನಡಪ್ರಭ

Share: