ದನಗಳನ್ನು ಆಹಾರವಾಗಿ ಬಳಸುವ ಪ್ರಶ್ನೆಯಲ್ಲಿ ಅಘಾತಕಾರಿಯಾದದ್ದು, ಅಪವಿತ್ರವಾದದ್ದು ಏನೂ ಇಲ್ಲ. ಪ್ರಾಚೀನ ಕಾಲದಲ್ಲಿ ಆರ್ಯರಲ್ಲಿ ದನದ ಮಾಂಸದ ಬಳಕೆ ವ್ಯಾಪಕವಾಗಿತ್ತು. ಇಂದಿಗೂ ದೊಡ್ಡ ಸಂಖ್ಯೆಯ ಜನ ಇದನ್ನು ಆಹಾರವಾಗಿ ಬಳಸುತ್ತಾರೆ.ಆದರೆ ಕೋಮುವಾದಿ ರಾಜಕೀಯ ಮಹತ್ವಾಕಾಂಕ್ಷೆಗಳು ದನದ ಮಾಂಸದ ಪ್ರಶ್ನೆಯನ್ನು ವಿವಾದದ ಪ್ರಶ್ನೆಯಾಗಿಸಿವೆ. ಪ್ರಸ್ತುತ ವಿದಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಾಂತ್ರಿಕ ಕಾರಣಗಳ ಮೇಲೆ ಹಿಂದೆ ಪಡೆದಿದ್ದರೂ ಅದು ಜನವಿರೋಧಿ ಸ್ವರೂಪದಲ್ಲಿ ಮತ್ತೆ ಬರುವ ಸಂದರ್ಭ ಹತ್ತಿರದಲ್ಲೇ ಇದೆ.
`ಗೋಹತ್ಯೆ ನಿಷೇದ‘ ಕಾಯ್ದೆಯನ್ನು ಜಾರಿಗೆ ತಂದು ಸಂಘ ಪರಿವಾರದ ಪಡೆಗಳು ಇನ್ನಷ್ಟು ಮುಸ್ಲಿಂ ಮತ್ತು ದಲಿತರ ಮೇಲೆ ಎರಗಲು ಅನುವು ಮಾಡಿಕೊಡಲು ಕಳೆದ ಅಧಿವೇಶನದಲ್ಲೇ ಸಂಚು ರೂಪಿಸಲಾಗಿತ್ತು. ಆದರೆ ಜನರ ವಿರೋಧ ರಾಜಕೀಯವಾಗಿ ಬಯಲಾಗತೊಡಗಿದ ಪರಿಣಾಮ ಆ ಅಧಿವೇಶನದಲ್ಲಿ ಗೋಹತ್ಯೆ ನಿಷೇದದ ಕಾಯಿದೆಯನ್ನು ಜಾರಿಗೆ ತರುವ ಧೈರ್ಯ ಮಾಡಲಿಲ್ಲ. ಬದಲಿಗೆ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ವೈದಿಕವಾದಿ ಗೃಹಸಚಿವ ಆಚಾರ್ಯ ನೇತೃತ್ವದಲ್ಲಿ ಸಂಪುಟ ಉಪಸಮಿತಿಯ ಸುಪರ್ದಿಗೆ ವಹಿಸಲಾಗಿತ್ತು. ಇಷ್ಟಾದರೂ ಬಿಜೆಪಿ ಮತ್ತು ಸಂಘ ಪರಿವಾರದ ತನ್ನ ಬಾಲಂಗೋಚಿ ಮಠಾಧಿಪತಿಗಳು, ಸಂಘ ಪರಿವಾರದ ಎಲ್ಲಾ ಸಂಘ ಸಂಸ್ಥೆಗಳು `ಹಸುವನ್ನು ಸ್ಮರಿಸೋಣ ಪುಣ್ಯವನ್ನು ಗಳಿಸೋಣ‘,ಎಂಬಿತ್ಯಾದಿ ಘೋಷಣೆಗಳಡಿ ಗೋ ಗ್ರಾಮ ಯಾತ್ರೆಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ. ಇದಕ್ಕೆಲ್ಲಾ ಮೇವು, ನೀರು ಹಾಕಿ ಗೋ ಗ್ರಾಮ ಯಾತ್ರೆಗಳನ್ನು ಸಾಗಿಸುತ್ತಿರುವುದು ಬಿಜೆಪಿಯೇ ಎಂಬುದನ್ನು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.
ಅನಾಗರಿಕರಿಗೆ ಹಸುಗಳ ಮೇಲೆ ಪ್ರೀತಿ ಹುಟ್ಟಿದ್ದು ಯಾವಾಗ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವವಾದಿಗಳು ಉಗ್ರಗಾಮಿಗಳಾಗಿ ಅಲ್ಪಸಂಖ್ಯಾತ, ದಲಿತರ ಮೇಲೆ ಎರಗಿ ಗೋರಕ್ಷಣೆ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸುವುದು ಇದೇ ಮೊದಲಲ್ಲ. ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ (2002ರಲ್ಲಿ) ಗೋಹತ್ಯೆ ನಿಷೇದ ಕಾಯಿದೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದು ಕೂಡಾ ಮೊದಲಲ್ಲ. ಬಹಳ ವರ್ಷಗಳ ಹಿಂದೆಯೇ ಅಂದರೆ 1870 ರಲ್ಲಿ ಮುಸ್ಲಿಂ ಜನತೆಯ ವಿರುದ್ಧ ಸಾಮೂಹಿಕವಾಗಿ ಹಿಂದುಗಳನ್ನೆಲ್ಲಾ ಎತ್ತಿಕಟ್ಟಲು ಮೊದಲಿಗೆ ಪಂಜಾಬ್ನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ನಂತರದಲ್ಲಿ ದಯಾನಂದ ಸರಸ್ವತಿಯವರು 1882 ರಲ್ಲಿ “ಗೋರಕ್ಷಣೆ ಸಭಾ” ನಡೆಸುವ ಮೂಲಕ ರಾಜಕೀಯವಾಗಿ ಹಿಂದೂಗಳನ್ನು ಮತೋನ್ಮಾದಗೊಳಿಸಲು ಹಸುವನ್ನು `ಆಯುಧ‘ವನ್ನಾಗಿ ಮಾಡಿಕೊಳ್ಳಲಾಯಿತು. 1880 ಮತ್ತು 1890 ರಲ್ಲೇ ಗೋರಕ್ಷಣೆ ಹೆಸರಿನಲ್ಲಿ ಹಿಂದೂ, ಮುಸ್ಲಿಂ ನಡುವೆ ಕೋಮುಗಲಭೆಗಳನ್ನು ಸೃಷ್ಠಿಸಲಾಗಿತ್ತು. ಈ ಸಂದರ್ಭದಲ್ಲಿ ನೂರಾರು ಹಿಂದೂ, ಮುಸ್ಲಿಂ ಜನತೆ ಗಲಭೆಯಲ್ಲಿ ಸತ್ತರು. ತೀವ್ರತರ ಗಾಯಗೊಂಡರು.ಇದೇ ಸಂದರ್ಭದಲ್ಲಿ ದೇಶಾದ್ಯಂತ ಕೋಮುಗಲಭೆಗಳು ಹರಡತೊಡಗಿದವು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಕೋಮುವಾದಿಗಳು ಭಾವನಾತ್ಮಕವಾಗಿ ಜನತೆಯನ್ನು ಹುಚ್ಚೆಬ್ಬಿಸುತ್ತಲೇ ಬಂದವು. ಇಷ್ಟಾದರೂ ಸಂವಿಧಾನದ ಆಶಯದಂತೆ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 12 ವರ್ಷ ಮೀರಿದ ಹಸುಗಳು, ಎತ್ತುಗಳು, ಎಮ್ಮೆ ಹಾಗೂ ಇನ್ನಿತರ ಸಾಕು ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸಲು ಸುಪ್ರಿಂ ಕೋರ್ಟ್ 1966 ರಲ್ಲೇ ಅವಕಾಶ ನೀಡಿತ್ತು.ಇದನ್ನು ಸಹಿಸದ ಮತಾಂಧರು ರಾಜಕೀಯ ಲಾಭಕ್ಕಾಗಿ ಕೋಮುವಾದಿ ರಾಜಕೀಯ ಪಕ್ಷಗಳು
ಸಂಘ ಪರಿವಾರದ ಪೂರ್ವಿಕರೇ ಮೊದಲಿಗೆ ಗೋ ಭಕ್ಷಕರು
ಭಾರತ ದೇಶದ ಐತಿಹಾಸ ಬಲ್ಲ ಎಲ್ಲರಿಗೂ ಆರ್ಯರ ಮೂಲ ಯಾವುದು. ಅವರ ಕುಲ ಕಸುಬುಬೇನೆಂಬುದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳ ಮೂಲಕ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕವೂ ದೃಢಪಟ್ಟಿದೆ. ಋಗ್ವೇದದಲ್ಲಿ ಮಹಾಭಾರತದ,ರಾಮಾಯಣದ ಗ್ರಂಥಗಳಲ್ಲೂ ಗೋಮಾಂಸ ಭಕ್ಷಣೆಯ ಉಲ್ಲೇಖಗಳು ವಿಜೃಂಭಿಸುತ್ತವೆ. ಋಗ್ವೇದದಲ್ಲಿ ಅನೇಕ ಬಾರಿ ಪ್ರಚುರಪಡಿಸುವುದೇನೆಂದರೆ ಹಿಂದೂ ದೇವರಾದ ಇಂದ್ರನಿಗೆ ಎತ್ತಿನ ಮಾಂಸವೇ ಇಷ್ಟವಾಗಿತ್ತಂತೆ. ಯಾಕೆಂದರೆ ಶತ್ರುಗಳ ಸಂಹಾರಕ್ಕಾಗಿ ತನ್ನ ದೇಹಧಾಡ್ಯತೆ ಮತ್ತು ಬಾಹುಗಳನ್ನು ಗಟ್ಟಿಗೊಳಿಸಲು ಎಂದು ಅನೇಕ ಬಾರಿ `15ಕ್ಕಿಂತ ಹೆಚ್ಚಿನ ಎತ್ತುಗಳು ಹಾಗೂ 30 ರಿಂದ 1000 ಕೋಣಗಳನ್ನು ಅಗ್ನಿಯಿಂದ ಸುಟ್ಟಿದ್ದ ಮಾಂಸಹಾರವನ್ನು ನನಗಾಗಿ ತಯಾರು ಮಾಡಲಾಗಿತ್ತೆಂದು‘ಇಂದ್ರನೇ ಹೇಳಿದ್ದಾನೆ. ಇಂತಹ ಉದಾಹರಣೆಗಳನ್ನು ನಾವು ಡಾ. ಡಿ.ಎನ್.ಜಾ ರವರು ಸಂಶೋಧನೆ ನಡೆಸಿ ಸಂಪಾದಿಸಿರುವ`ದಿ ಮಿಥ್ ಅಫ್ ದಿ ಹೋಲಿ ಕೌ‘ ಎಂಬ ಪುಸ್ತಕ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ರವರ ಬರಹಗಳು ಮತ್ತು ಭಾಷಣಗಳ ಸಂಪುಟ7 ರಲ್ಲಿ ಮತ್ತು ಸಂಪುಟ 5 ರಲ್ಲಿ ನೋಡಬಹುದು.
ನಾಲಿಗೆಗೆ ಮೆತ್ತಗಿರಲು ಹಾಗೂ ಕೊಬ್ಬಿರುವ, ಹುಟ್ಟಿ ಎರಡು ಮೂರು ದಿನಗಳನ್ನು ಮಾತ್ರ ಕಳೆದಿರುವ ಎಳೆಯ ಕರುಗಳನ್ನು ತಿಂದು ತೇಗುತ್ತಿದ್ದ ಬ್ರಾಹ್ಮಣರು ಸಸ್ಯಹಾರಿಗಳಾಗಲು ಕಾರಣವೇನು? ಡಾ.ಬಿ.ಆರ್.ಅಂಬೇಡ್ಕರ್ರವರು ಹೇಳಿದಂತೆ ಬ್ರಾಹ್ಮಣರು ಹಸುಗಳನ್ನು ದಾನ ಪಡೆದು ಪಶು ಸಂಗೋಪನೆ ಮಾಡುತ್ತಿರಲಿಲ್ಲ. ವ್ಯವಸಾಯವನ್ನು ಮೊದಲಿನಿಂದಲೇ ಮಾಡುತ್ತಿರಲಿಲ್ಲ.ಬದಲಿಗೆ ಕಟುಕರಾಗಿದ್ದಲ್ಲದೇ ಗೋಮಾಂಸ ಭಕ್ಷಕರಾಗಿದ್ದರೆಂದು ಹೇಳಿದ್ದಾರೆ.
ಬ್ರಾಹ್ಮಣ ಅತಿಥಿ ಮನೆಗೆ ಬಂದರೆ ಅವನನ್ನು ಗೋಘ್ನ (`Go Ghna‘) ಎಂದು ಕರೆಯತ್ತಿದ್ದರು. ಯಾಕೆಂದರೆ ಆ ಅತಿಥಿಯನ್ನು ಸತ್ಕರಿಸಲು ಒಂದು ಹಸುವನ್ನು ಹತ್ಯೆ ಮಾಡಿ ಮಾಂಸದೂಟವನ್ನು ತಯಾರಿ ಮಾಡಿಕೊಡಬೇಕಿತ್ತು. ಆದ್ದರಿಂದ ಅತಿಥಿಯಾಗಿ ಬಂದ ಬ್ರಾಹ್ಮಣನನ್ನು `ಗೋಘ್ನ‘ ಎಂದು ಕರೆಯುತ್ತಿದ್ದರು. ಹೀಗೆ ಋಗ್ವೇದದಲ್ಲಿ, ವಿವಿಧ ರೀತಿಯಲ್ಲಿ ಹಸು ಎತ್ತು, ಎಮ್ಮೆಗಳನ್ನು ಯಜ್ಞಗಳ ಹೆಸರಿನಲ್ಲಿ ಬಲಿಕೊಟ್ಟು ಬ್ರಾಹ್ಮಣರೆಲ್ಲರೂ ಭಕ್ಷಿಸುತ್ತಿದ್ದರು. ಅಶ್ವಮೇಧ, ರಾಜಸೂಯ ಮತ್ತು ವಾಜಪೇಯ ಇಂತಹ ಯಜ್ಞಗಳಲ್ಲಿ ಮುಖ್ಯವಾಗಿ ಸಾವಿರಾರು ಪ್ರಾಣಿಗಳನ್ನು ಬಲಿಕೊಟ್ಟು ಸಾಮೂಹಿಕವಾಗಿ ಭಕ್ಷಿಸುತ್ತಿದ್ದರು. ಇಂತಹ ಯಜ್ಞಗಳ ಮೂಲಕ, ಧಾನ-ಧರ್ಮಗಳ ಮೂಲಕ ಸಂಘ ಪರಿವಾರದ ಪೂವರ್ಿಕರು ದನದ ಮಾಂಸವನ್ನು ಭಕ್ಷಿಸುತ್ತಿದ್ದರೆಂಬುದಕ್ಕೆ ಪುರಾತತ್ವ ಆಧಾರಗಳು (archacological evidence) ಸಾಕ್ಷೀಕರಿಸಿವೆ. ಮೀರತ್ನ ಹಸ್ತೀನಾಪುರದಲ್ಲಿ ಎತ್ತು, ಹಸು,ಎಮ್ಮೆಗಳ ಕತ್ತರಿಸಲ್ಪಟ್ಟಂತಹ ಮೂಳೆಗಳ ರಾಶಿ ರಾಶಿ ಪಳೆಯುಳಿಕೆಗಳೇ ಗೊತ್ತುಪಡಿಸುತ್ತಿವೆ. ಇದೇ ರೀತಿ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮುಂತಾದೆಡೆ ಮೂಳೆಗಳ ರಾಶಿ ಕಾಣಬಹುದೆಂದು ಇತಿಹಾಸತಜ್ಞರು ದೃಢಪಡಿಸಿದ್ದಾರೆ.
ಪುರಾತನ ಕಾಲದಲ್ಲಿ ಎಲ್ಲಾ ಪ್ರಾಣಿಗಳನ್ನು ಭಕ್ಷಿಸುತ್ತಿದ್ದವರು ಸಸ್ಯಹಾರಿಗಳಾಗಲು ಕಾರಣವೇನು ಎಂಬುದು ಜನಸಾಮಾನ್ಯರಲ್ಲಿ ಹುಟ್ಟುವ ಪ್ರಶ್ನೆ. ಇತಿಹಾಸ ತಜ್ಞರೇ ದೃಢಪಡಿಸಿರುವ ಹಾಗೆ ಶುದ್ಧ ಸೋಮಾರಿಗಳಾಗಿ ಯಜ್ಞ, ಯಾಗಾದಿಗಳ ಹೆಸರಿನಲ್ಲಿ ಹಿಂಸೆಗಳಿಗೆ ನಾಂದಿ ಹಾಡುತ್ತಿದ್ದ ಸನಾತನ ಬ್ರಾಹ್ಮಣ್ಯದ ಅಧರ್ಮವನ್ನು ಧಿಕ್ಕರಿಸಿ ಬೌದ್ಧ ಧರ್ಮಕ್ಕೆ ಜನರು ಆಕರ್ಷಿತರಾಗತೊಡಗಿದ್ದರು. ಇಂಥ ಸಂದರ್ಭದಲ್ಲಿ ಬ್ರಾಹ್ಮಣ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಗೋಮಾಂಸ ಭಕ್ಷಕರು ಗೋರಕ್ಷಕರಾಗಿ ಪರಿವರ್ತನೆಗೊಂಡರು. ಬೌದ್ಧ ಧರ್ಮದ ಭಿಕ್ಕುಗಳು ಹಾಗೂ ಬ್ರಾಹ್ಮಣ್ಯದ ವಿರುದ್ಧ ಸಂಘರ್ಷವೇ ನಡೆದು ಲಕ್ಷಾಂತರ ಬೌದ್ಧ ಭಿಕ್ಕುಗಳನ್ನು ಕೊಲ್ಲಲಾಯಿತು. ಇಂಥವುಗಳಿಗೆ ನಾಯಕತ್ವ ನೀಡಿದವರು ಶಂಕರಾಚಾರ್ಯರು.ಅಮಾನವೀಯ ಪದ್ಧತಿ, ಮೌಢ್ಯತೆಯನ್ನು ಎತ್ತಿಹಿಡಿದಿದ್ದುದರ ಪರಿಣಾಮವೇ ದೇಶದಲ್ಲಿ ಜಾತಿ ಅಸ್ಪೃಶ್ಯತೆಯ ಆಚರಣೆ ಅನಾಗರೀಕತೆ ಭಾರತದಲ್ಲಿ ಮುಂದುವರೆದಿದೆ. ಆಧುನಿಕ ಯುಗದಲ್ಲೂ ನೇಗಿಲ ಗುಳದಿಂದ ದಲಿತ ಸೋದರಿಯರ ಯೋನಿಗೆ ಚುಚ್ಚಿ ಸಾಯಿಸುತ್ತಾರೆ. (ಮಹಾರಾಷ್ಟ್ರದ ಖ್ಯೆರ್ಲಾಂಜಿ ಘಟನೆ) ಜೀವಂತ ಸುಡುತಾರೆ. ಮಲ ತಿನ್ನಿಸುತ್ತಾರೆ, ಮೂತ್ರ ಕುಡಿಸುತ್ತಾರೆ. ದೇಶದ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆ ಜನತೆ ಮೇಲ್ಜಾತಿ ಜನರಎದುರು ನಡುಬಗ್ಗಿಸಿಯೇ ನಡೆಯುವಂತೆಯೇ ನಿರ್ಭಂಧಿಸಲಾಗಿದೆ. ಇಂತಹ ಕ್ರೌರ್ಯಗಳ ಬಗ್ಗೆ ಕರುಣೆ ಇಲ್ಲದೆ ಬಡ, ದಲಿತ, ಅಲ್ಪಸಂಖ್ಯಾತರು ಹಿಂದುಳದ ವರ್ಗಗಳು ಬಳಸುವ ದನದ ಮಾಂಸದ ಆಹಾರದ ಹಕ್ಕನ್ನು ಕಸಿಯಲು ಹೊರಟಿದ್ದಾರೆ. ರಾಜಕೀಯ ಲಾಭಕ್ಕಾಗಿ ಮುಸ್ಲಿಂರ ವಿರುದ್ಧ, ಮುಸ್ಲಿಂರ ಆಗಮದಿಂದಲೇ ಭಾರತದಲ್ಲಿ ಗೋಹತ್ಯೆ ಆರಂಭವಾಯಿತೆಂದು ಇತಿಹಾಸವನ್ನು ತಿರುಚಿ ರಾಷ್ಟ್ರೀಯ ಪ್ರಾಣಿ ಹಸು ಎಂದು ಘೋಷಿಸಲು ಒತ್ತಡ ಹೇರುತ್ತಿದ್ದಾರೆ. ದುಡಿಯುವ ರೈತಾಪಿ ವರ್ಗ ಹಸುಗಳ ಆರೈಕೆಯೊಂದಿಗೆ ಜೀವನ ನಡೆಸಿ ಉಪಯೋಗವಿಲ್ಲದ ಸಂದರ್ಭದಲ್ಲಿ ಕಸಾಯಿ ಖಾನೆಗೆ ಮಾರುವುದುಂಟು. ನಂತರದಲ್ಲಿ ಈ ದನಗಳ ಮಾಂಸ ಬಡವರಿಗೆ ಆಹಾರವಾಗಿ ಮತ್ತು ಚರ್ಮೋದ್ಯೋಗ ಲಕ್ಷಾಂತರ ಜನರ ಉದ್ಯೋಗದ ಆಸರೆಯೂ ಆಗಿದೆ.
ಹೀಗಿರುವಾಗ ಸುಖದ ಸುಪ್ಪತ್ತಿಗೆಯಲ್ಲಿರುವವರು, ಹಸುವಿನ ಹತ್ತಿರ ಸುಳಿಯದವರು, ತಮ್ಮ ಡೈನಿಂಗ್ ಟೇಬಲ್ ಮೇಲೆ ಪ್ರತಿನಿತ್ಯ ಕೆ.ಜಿ.ಗಟ್ಟಲೆ ಸೇಬು ಹಣ್ಣುಗಳನ್ನು ಇಟ್ಟುಕೊಂಡು ತಿನ್ನುವಂತೆ ಪ್ರತಿನಿತ್ಯ ದನದ ಮಾಂಸವನ್ನು ಬಡಜನತೆ ತಿನ್ನುವುದಿಲ್ಲ.ಹದಿನೈದು ದಿವಸಕ್ಕೊ,