ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗ್ರಾಮೀಣ ಪ್ರದೇಶದೆಡೆಗೆ... ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು...

ಗ್ರಾಮೀಣ ಪ್ರದೇಶದೆಡೆಗೆ... ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು...

Tue, 01 Dec 2009 18:14:00  Office Staff   S.O. News Service

ಗ್ರಾಮೀಣ ಪ್ರದೇಶದೆಡೆಗೆ...ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು...

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಸಮುದಾಯದ ಆರೋಗ್ಯದ ರಕ್ಷಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಳವಡಿಸಿಕೊಳ್ಳಲಾಗಿದೆ. ೧,೩೮,೧೪೬ ಉಪ ಆರೋಗ್ಯ ಕೇಂದ್ರಗಳಲ್ಲಿ ೧,೦೨,೭೫೨ ಉಪಕೇಂದ್ರದ ಕಿರಿಯ ಆರೋಗ್ಯ ಮಹಿಳಾ ಸಹಾಯಕರು ಮುಕ್ತ ನಿಧಿಯನ್ನು ವ್ಯವಹರಿಸಲು ಸರಪಂಚರ ಜೊತೆಯಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದಾರೆ. ಮುಕ್ತ ನಿಧಿಯನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯಯ ಮಾಡಬಹುದು. ಉದಾ-ಬಿ.ಪಿ.ತಪಾಸಣೆ ಉಪಕರಣದಿಂದ ತೂಕ ಮಾಡುವ ಯಂತ್ರ ಸ್ಟೆತಾಸ್ಕೋಪ್, ಬಕೆಟ್ಟುಗಳು, ಶುಚೀಕರಣಕ್ಕಾಗಿ ಮಾಡುವ ವೆಚ್ಚಗಳು ಸೇರಿವೆ. ರಾಜ್ಯಗಳಿಗೆ ರಾಜ್ಯ ಗ್ರಾಮೀಣ ಆರೋಗ್ಯ ಅಭಿಯಾನ ಔಷಧಗಳನ್ನು ಸಹ ಒದಗಿಸಲಾಗಿದೆ. ಇವೆಲ್ಲವೂ ಉಪ ಆರೋಗ್ಯ ಕೇಂದ್ರವನ್ನು ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿದೆ.

1g.jpg

ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ದಿನ ಆಚರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಾರೆ. ಕಳೆದ ೨ವರ್ಷಗಳಲ್ಲಿ ೪ ಲಕ್ಷ ಆರೋಗ್ಯ ಮತ್ತು ನೈರ್ಮಲ್ಯ ದಿನವನ್ನು ಆಚರಿಸುತ್ತಾರೆ. ಚುಚ್ಚು ಮದ್ದು ಕಾರ್ಯಕ್ರಮದಲ್ಲಿಯೂ ಉತ್ತಮ ಸುಧಾರಣೆ ಎಂದು ವರದಿಯಾಗಿದೆ. ಉಪಕೇಂದ್ರವು ಆಶಾ ಮತ್ತು ಜನರ ನಡುವೆ ಸಂಪರ್ಕ ಏರ್ಪಟ್ಟು ಜನರು ಉತ್ತಮ ಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಹಾಯಕವಾಗಿದೆ.

2g.gif

ಪಶ್ಚಿಮ ಬಂಗಾಳದ ಒಂದು ಗ್ರಾಮ ಪಂಚಾಯತಿನಲ್ಲಿ ಪಂಚಾಯತ್ ಮಟ್ಟದ ವಿಶೇಷ ತಜ್ಞರ ಶಿಬಿರವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ರೀಜ್ಯದಲ್ಲಿ ಮುಕ್ತ ನಿಧಿ ಬಳಕೆಯಿಂದ ಕೆಲವು ಉಪಕೇಂದ್ರಗಳಲ್ಲಿ ಹೆರಿಗೆ ಮಾಡುವುದನ್ನು ಪ್ರಾರಂಭಿಸಲಾಗಿದೆ. ತಮಿಳುನಾಡಿನಲ್ಲಿ ಗ್ರಾಮೀಣ ಆರೋಗ್ಯದಾದಿಯು ತುರ್ತು ಪರಿಸ್ಥಿತಿಯನ್ನು ವರದಿ ಮಾಡಲು ಮುಕ್ತ ನಿಧಿಯಿಂದ ಒಂದು ಮೊಬೈಲ್ ಫೋನ್‌ಅನ್ನು ಖರೀದಿ ಮಾಡಿರುತ್ತಾರೆ. ಕೆಲವು ರಾಜ್ಯಗಳಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಆರೋಗ್ಯ ಕಾರ್ಯಕರ್ತೆಯರು ಮುಕ್ತ ನಿಧಿ ಬಳಕೆ ಮಾಡುವಲ್ಲಿ ಸ್ಪಲ್ಪ ವಿಳಂಬವಾಗಿದೆ.೨೨,೪೪೮ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ಒಪ್ಪಂದದ ಮೇಲೆ ನೇಮಕ ಮಾಡಲಾಗಿದೆ. ೧೦,೧೪೩ ಉಪಕೇಂದ್ರಗಳಲ್ಲಿ ೨ ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆರು ಕೆಲಸ ನಿರ್ವಹಿಸುತ್ತಿರುವುದಾಗಿ ವರದಿ ಮಾಡಿರುತ್ತಾರೆ.

3g.jpg

ಇಷ್ಟೊಂದು ಸಂಖ್ಯೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ನೇಮಕ ಮಾಡುವುದು ಒಂದು ಸಹವಾಸವೇ ಸರಿ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ತರಬೇತಿ ನೀಡುತ್ತಿದ್ದ ಶಾಲೆಗಳು ಮುಚ್ಚಿದ್ದು ಈಗ ಪುನ: ಪ್ರಾರಂಭಿಸಿದೆ. ಪಶ್ಚಿಮ ಬಂಗಾಳ ಒಂದು ನೂತನ ರೀತಿಯನ್ನು ಅನುಸರಿಸುತ್ತಿದೆ. ದೂರದ ಪಂಚಾಯತ್‌ನಿಂದ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ ಅವರನ್ನು ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಕೊಡಿಸಲಾಗುತ್ತಿದೆ. ಮದ್ಯ ಪ್ರದೇಶ ರಾಜ್ಯದಲ್ಲಿ ಅಭಿಯಾನದ ಹಣದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಹೆಣ್ಣುಮಕ್ಕಳಿಗೆ ದಾದಿಯ ತರಬೇತಿಯನ್ನು ಕೊಡಲಾಗುತ್ತಿದೆ.

4g.jpg

ಅಭಿಯಾನದ ಹಣಕಾಸಿನ ನೆರವಿನಿಂದ ದಾದಿಯರ ತರಬೇತಿ ಶಾಲೆಗಳನ್ನು ಮತ್ತು ಸಂಸ್ಥೆಗಳನ್ನು ಬಲಗೊಳಿಸಲಾಗುತ್ತಿದೆ. ಸ್ಪಲ್ಪ ಸಮಯದ ನಂತರ ಖಾಲಿ ಇರುವ ದಾದಿಯರ ಹುದ್ದೆಯನ್ನು ಭರ್ತಿ ಮಾಡಲು ಹೆಚ್ಚಿನ ಸಂಖ್ಯೆ ದಾದಿಯರು ದೊರೆಯಬಹುದು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲಿ ಹೆಚ್ಚಿನ ಸಂಖ್ಯೆಯಲ್ಲಿ ದಾದಿಯರು ದೊರೆಯುತ್ತಿರುವುದರಿಂದ ಈ ರಾಜ್ಯಗಳ ದಾದಿಯರನ್ನು ನೇಮಕ ಮಾಡಿದೆ. ಉತ್ತರ ಪ್ರದೇಶ , ಬಿಹಾರ, ಮಧ್ಯಪ್ರದೇಶ ಜಾರ್ಖಾಂಡ್, ಛತ್ತೀಸ್‌ಘಡ್ , ಒರಿಸ್ಸಾ ರಾಜ್ಯಗಳಲ್ಲಿ ದಾದಿಯರನ್ನು ನೇಮಕ ಮಾಡಲು ಸಮಯ ಬೇಕಾಗಬಹುದು.ಹಲವಾರು ದಾದಿಯರ ತರಬೇತಿ ಶಾಲೆಗಳನ್ನು ಬಹಳ ವರ್ಷಗಳ ನಂತರ ಪುನ: ಪ್ರಾರಂಭಿಸಲಾಗಿದೆ. ದಾದಿಯರ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಗೊಳಿಸಬೇಕಾಗಿದೆ. ಮನೇರಿಯಾ ರೋಗದಿಂದ ನರಳುತ್ತಿರುವ ರಾಜ್ಯಗಳು ಉಪಕೇಂದ್ರದಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯನ್ನು ಮನಗಂಡಿದೆ. ಉಪಕೇಂದ್ರದ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತೆಯರ ಕರ್ತವ್ಯ ಮತ್ತು ಜವಬ್ದಾರಿಯನ್ನು ವಿವರವಾಗಿ ತಿಳಿಸುವುದು ಉತ್ತಮ ವರದಿ ಮಾಡುವ ಕ್ರಮವನ್ನು ಬಲಪಡಿಸಬೇಕಾದ ಅವಶ್ಯಕತೆ ಇದೆ. ಆಶಾ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳೊಡನೆ ಸಮನ್ವಯ ಸಾಧಿಸಬೇಕು. ತರ್ಕಬದ್ದಾದ ವರ್ಗಾವಣೆ ನೀಚಿಯನ್ನು ಜಾರಿಗೆ ತರುವ ಅವಶ್ಯಕತೆ ಇದೆ ಮತ್ತು ಸ್ಖಳೀಯ ಆದ್ಯತೆಗ ಗಮನ ನೀಡಬೇಕು.
ಶಂಶೀರ್, ಬುಡೋಳಿ

Share: