ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ನೆರೆಸಂತ್ರಸ್ತ ಪ್ರದೇಶಗಳಿಗೆ ಮಜ್ಲಿಸೆ ಇಸ್ಲಾಹ್ ತಂಡ ಭೇಟಿ

ಭಟ್ಕಳ: ನೆರೆಸಂತ್ರಸ್ತ ಪ್ರದೇಶಗಳಿಗೆ ಮಜ್ಲಿಸೆ ಇಸ್ಲಾಹ್ ತಂಡ ಭೇಟಿ

Sun, 11 Oct 2009 03:16:00  Office Staff   S.O. News Service
ಭಟ್ಕಳ, ಅಕ್ಟೋಬರ್  11:  ಕಾರಾವಾರ ತಾಲ್ಲೂಕಿನಲ್ಲಿ ಇತ್ತೀಚೆಗೆ ನೆರೆಯಿಂದ ಪ್ರಭಾವಿತವಾಗಿರುವ ಪ್ರದೇಶಗಳಿಗೆ ಭಟ್ಕಳದ ಮಜ್ಲಿಸ್ ಎ ಇಸ್ಲಾಹ್ ಸಂಘಟನೆ ಭೇಟಿ ನೀಡಿತು.  ಅಧ್ಯಕ್ಷ ಬದರುಲ್ ಹಸನ್ ರವರ ನೇತೃತ್ವದಲ್ಲಿ  ಸಂಘಟನೆಯ ಹಲವು ಸದಸ್ಯರು ಸಂತ್ರಸ್ತರನ್ನು ಭೇಟಿಯಾಗಿ ತಮ್ಮ ಸಾಂತ್ವಾನವನ್ನು ಪ್ರಕಟಿಸಿದರು. ಬಳಿಕ ಸಂಘಟನೆ ಇತ್ತೀಚಿಗೆ ಭೂಕುಸಿತದಿಂದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿತು. 
 7_tanzeem_karwar_1.jpg

ಸ್ಥಳೀಯರ ಪ್ರಕಾರ ಮಳೆ ಮಾತ್ರ ಈ ವ್ಯಾಪಕ ಭೂಕುಸಿತಕ್ಕೆ ಕಾರಣವಲ್ಲ, ಬದಲಿಗೆ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಭೂಕಂಪದ ಕಾರಣ ಸುಮಾರು ಒಂಭತ್ತು ಮನೆಗಳ ಮೇಲೆ ಮಣ್ಣು ಕುಸಿದುಬಿದ್ದಿದೆ.  ಶುಕ್ರವಾರ ಸಂಜೆ ಈ ಭೂಕಂಪ ಸಂಭವಿಸಿದ್ದು ಇಂಡೋನೇಶಿಯಾದಲ್ಲಿಯೂ ಇದೇ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿರುವುದು ಕಾಕತಾಳೀಯವಾಗಿದೆ. ಈ ಪ್ರದೇಶದಲ್ಲಿ ಸುಮಾರು ಐವತ್ತು ಮನೆಗಳಿವೆ ಹಾಗೂ ಎಲ್ಲರೂ ಭಯಗ್ರಸ್ತರಾಗಿದ್ದಾರೆ.

ಸಂತ್ರಸ್ತರನ್ನು ಭೇಟಿಯಾದ ತಂಡ ನಾಶಗೊಂಡ ಪ್ರದೇಶಗಳನ್ನು ವೀಕ್ಷಿಸಿ ಬಾಧೆಗೊಳಗಾದ ಸುಮಾರು ಮೂವತ್ತು ಮನೆಗಳಿಗೆ ಹೊದಿಕೆ, ಹಾಸಿಗೆ,ಬಟ್ಟೆ ಹಾಗೂ ಧನಸಹಾಯದ ಮೂಲಕ ತನ್ನ ಸಹಕಾರ ಪ್ರಕಟಿಸಿತು.  
7_tanzeem_karwar_3.jpg
7_tanzeem_karwar_4.jpg
7_tanzeem_karwar_5.jpg
7_tanzeem_karwar_6.jpg7_tanzeem_karwar_7.jpg
7_tanzeem_karwar_8.jpg
7_tanzeem_karwar_9.jpg
7_tanzeem_karwar_10.jpg
 
 
ತಂಡದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಜೆ. ಸೈಯದ್ ಖಲೀಲ್, ಸದಸ್ಯರಾದ ಸೈಯದ್ ಅಬ್ದುಲ್ ಕಾದಿರ್, ಅಬ್ದುಲ್ಲಾ ದಾಮೂದಿ, ಎಸ್.ಎಂ. ಸೈಯದ್ ಪರ್ವೇಜ್, ನಾಯ್ತೆ ಸಾದಿಕ್, ಇರ್ಫಾನ್ ಮೊಹ್ತೆಶಾಮ್, ಜಾಫಲ್ ಅಲಿಯಾಸ್ ತಂಜೀಂ ಜಾಫರ್ ಹಾಗೂ ಇಬ್ಬರು ಛಾಯಾಗ್ರಾಹಕರು ಉಪಸ್ಥಿತರಿದ್ದರು. 

Share: