ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ವಿಷ್ಣುವರ್ಧನ್ ನಿಧನವಾರ್ತೆ-ಹಿಂಸೆಗಿಳಿದ ಅಭಿಮಾನಿಗಳು

ಬೆಂಗಳೂರು: ವಿಷ್ಣುವರ್ಧನ್ ನಿಧನವಾರ್ತೆ-ಹಿಂಸೆಗಿಳಿದ ಅಭಿಮಾನಿಗಳು

Wed, 30 Dec 2009 18:37:00  Office Staff   S.O. News Service
ಬೆಂಗಳೂರು, ಡಿಸೆಂಬರ್ 31  ತಮ್ಮ ನೆಚ್ಚಿನ ನಾಯಕನ ಹಠಾತ್ ನಿರ್ಗಮನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ನ್ಯಾಶನಲ್ ಕಾಲೇಜು ಆವರಣದ ಬಳಿ ಆಗಮಿಸಿದ ವಿಷ್ಣುವರ್ಧನ್ ಅಭಿಮಾನಿಗಳು ಹಿಂಸೆಗಿಳಿದ ಘಟನೆ ವರದಿಯಾಗಿದೆ.
30_vishnu_vardhan_5.jpg 
30_bangalore_violence_8.jpg
ನ್ಯಾಶನಲ್ ಕಾಲೇಜು ಆವರಣದಲ್ಲಿ ವಿಷ್ಣುವರ್ಧನ್ ರವರ ಪಾರ್ಥವ ಶರೀರವನ್ನು ಸಾರ್ವಜನಿಕರ ಅಂತಿಮದರ್ಶನಕ್ಕಾಗಿ ಇಡಲಾಗಿದ್ದು ವ್ಯವಸ್ಥೆಯಲ್ಲಿನ ಅಸಮರ್ಪಕತೆ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು.

ಹಿಂಸೆಗಿಳಿದ ಅಭಿಮಾನಿಗಳು ಕಲ್ಲುತೂರಾಟ, ವಾಹನಗಳಿಗೆ ಜಖಂ ನಡೆಸಿ ನಿಲ್ಲಿಸಿದ್ದ ಪೋಲೀಸ್ ವಾಹನವೊಂದಕ್ಕೂ ಬೆಂಕಿ ಹಚ್ಚಿದರು. ಕಲ್ಲುತೂರಾಟದಲ್ಲಿ ಕನಿಷ್ಟ ಹತ್ತು ಜನರಿಗೆ ಗಾಯವಾಗಿದೆ, ೭೮ ಬಸ್ಸುಗಳಿಗೆ ಹಾನಿಯಾಗಿದೆ. ಮೂರು ಪತ್ರಿಕಾ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.  

ಪರಿಸ್ಥಿತಿಯನ್ನು ನಿಭಾಯಿಸಲು ಪೋಲೀಸರು ಹರಸಾಹಸಪಡಬೇಕಾಯಿತು.  ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೋಲೀಸರು ರಬ್ಬರ್ ಬುಲೆಟ್ ಹಾಗೂ ಅಶ್ರುವಾಯು ಉಪಯೋಗಿಸಬೇಕಾಯಿತು. ರಬ್ಬರ್ ಬುಲೆಟ್ ಗಳಿಂದ ಹಲವರು ಗಾಯಗೊಂಡರು. 
30_bangalore_violence_10.jpg
30_bangalore_violence_7.jpg
30_bangalore_violence_7.jpg
30_bangalore_violence_5.jpg
30_bangalore_violence_4.jpg
30_bangalore_violence_3.jpg
30_bangalore_violence_2.jpg
30_bangalore_violence_1.jpg
30_vishnu_vardhan_1.jpg
30_vishnu_vardhan_2.jpg
30_vishnu_vardhan_3.jpg
30_vishnu_vardhan_6.jpg
30_vishnu_vardhan_7.jpg
30_vishnu_vardhan_8.jpg
30_vishnu_vardhan_9.jpg
30_vishnu_vardhan_10.jpg
30_vishnu_vardhan_11.jpg
30_vishnu_vardhan_12.jpg 
 
 
ಜೆಪಿ ನಗರದ ವಿಷ್ಣುವರ್ಧನ್ ನಿವಾಸದಿಂದ ನ್ಯಾಶನಲ್ ಕಾಲೇಜು ಆವರಣಕ್ಕೆ ಪಾರ್ಥವ ಶರೀರವನ್ನು ಕೊಂಡು ತರುತ್ತಿದ್ದಾಗ ಜಯನಗರ ಆಸ್ಪತ್ರೆ ಬಳಿ ಮೊದಲು ದೊಂಬಿ ಪ್ರಾರಂಭವಾಯಿತು. ಸುಗಮ ಸಂಚಾರಕ್ಕಾಗಿ ಪೋಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಅಭಿಮಾನಿಗಳು ಇದರಿಂದ ರೊಚ್ಚಿಗೆದ್ದು ಹಿಂಸೆಗಿಳಿದರು.  ಸುಂಕದಕಟ್ಟೆ, ರಾಜಾಜಿನಗರ, ರಾಮಕೃಷ್ಣ ಆಶ್ರಮ ಮೊದಲಾದೆಡೆ ಬಸ್ಸುಗಳಿಗೆ ಬೆಂಕಿ ಹಾಗೂ ಕಲ್ಲುತೂರಾಟ ನಡೆಸಲಾಯಿತು. 

ಇದೇ ವೇಳೆ ಮೈಸೂರು ಸಹಿತ ರಾಜ್ಯದ ದಕ್ಷಿಣ ಭಾಗದ ವಿವಿಧ ಪಟ್ಟಣ ನಗರಗಳಲ್ಲಿ ಸ್ವಯಂ ಘೋಷಿತ ಬಂದ್ ಆಚರಿಸಲಾಯಿತು. ವಿಷ್ಣುವರ್ಧನ್ ರವರ ಪತ್ನಿ ಭಾರತಿ ವಿಷ್ಣುವರ್ಧನ್ ರವರೇ ಬಳಿಕ ಜನರೆದುರು ನಿಂತು ಹಿಂಸೆಗಿಳಿಯದಂತೆ ಮನವಿ ಮಾಡಿಕೊಂಡರು.  

ಹಿಂಸೆಯ ಕಾರಣ ಹಲವು ನಗರ ಸಾರಿಗೆ ಬಸ್ಸುಗಳು ಓಡಾಟ ನಿಲ್ಲಿಸಿದವು.  ಜಯನಗರ, ಬಸವನಗುಡಿ, ಉತ್ತರಹಳ್ಳಿ, ಕೆಂಗೇರಿ ಮೊದಲಾದೆಡೆ ಬಸ್ ಸಂಚಾರ ವ್ಯತ್ಯಯಗೊಂಡಿದ್ದವು.  ಬಸ್ಸುಗಳ ಹಾಗೂ ನಾಗರಿಕರ ಕ್ಷೇಮಕ್ಕಾಗಿ ಈ ಕ್ರಮ ಅನುಸರಿಸಬೇಕಾಯಿತು ಎಂದು ಬಿಎಂಟಿಸಿ ವ್ಯವಸ್ಥಾಪಕರಾದ ಸೈಯದ್ ಜಮೀರ್ ಪಾಶಾ ತಿಳಿಸಿದ್ದಾರೆ. 

Share: