ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಉಜಿರೆ: ವಿಶ್ವ ತುಳು ಸಮ್ಮೇಳನ : ಸಚಿವ ಕೃಷ್ಣ ಪಾಲೆಮಾರ್ ಭೇಟಿ

ಉಜಿರೆ: ವಿಶ್ವ ತುಳು ಸಮ್ಮೇಳನ : ಸಚಿವ ಕೃಷ್ಣ ಪಾಲೆಮಾರ್ ಭೇಟಿ

Thu, 26 Nov 2009 14:48:00  Office Staff   S.O. News Service
ಉಜಿರೆ : ವಿಶ್ವ ತುಳು ಸಮ್ಮೇಳನಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್‍ಯಗಳಿಗು ವೇಗ ಸಿಕ್ಕಿದೆ. ಸಮ್ಮೇಳನದ ಮುಖ್ಯ ಸಭಾಂಗಣ, ನಗರ ಅಲಂಕಾರ, ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಕಾರ್‍ಯಗಳು ಭರದಿಂದ ಸಾಗುತ್ತಿವೆ.  ಈ ಹಿನ್ನೆಲೆಯಲ್ಲಿ ನವೆಂಬರ್ ೨೪ ರಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಸಮ್ಮೇಳನದ ಕಛೇರಿಗೆ ಭೇಟಿ ನೀಡಿ ಸಮ್ಮೇಳನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
 
ವಿಶ್ವ ತುಳು ಸಮ್ಮೇಳನದ ಪ್ರಧಾನ ಕಾರ್‍ಯದರ್ಶಿ ಮೋಹನ್ ಆಳ್ವ ಇಲ್ಲಿನ ಕಾರ್‍ಯ ವೈಖರಿಯ ಬಗ್ಗೆ ವಿವರಣೆ ನೀಡಿದರು. ಸಚಿವರು ಬೆಳ್ತಂಗಡಿ ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ೩ ದಿನಗಳ ರಜೆ ಘೋಷಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಕಾವೇರಿಯಪ್ಪ, ಕುಲ ಸಚಿವ ಡಾ. ಚಿನ್ನಪ್ಪ ಗೌಡ, ಪ್ರತಾಪ್ ಸಿಂಹ ನಾಯಕ್, ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಹಾವೀರ ಅಜ್ರಿ ಮೊದಲಾದವರು ಉಪಸ್ಥಿತರಿದ್ದರು.


Share: