ಮಂಗಳೂರು, ಫೆಬ್ರವರಿ 22: ದುಬೈಯಿಂದ ಬಜ್ಪೆ ನಿಲ್ದಾಣಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಯಾವುದೇ ದಾಖಲೆಪತ್ರವಿರದ ಎಂಭತ್ತಾರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಸ್ಟಂಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ವ್ಯಕ್ತಿಗಳು ಭಟ್ಕಳ ಮೂಲದವರೆಂದು ತಿಳಿದುಬಂದಿದ್ದು ತನಿಖೆ ಪ್ರಗತಿಯಲ್ಲಿದೆ.